ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡದ ಹಿನ್ನೆಲೆ ಗರಂ ಆಗಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಕ್ಕೆ ನಿರ್ಧರಿಸಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಗೆ ಮಾತನಾಡಲು ಆಹ್ವಾನ ನೀಡಿದ್ದರು. ಆದರೆ ಕಡೆಯ ನಿಮಿಷದಲ್ಲಿ ಆಹ್ವಾನ ಹಿಂಪಡೆಯಲಾಗಿತ್ತು. ಈ ಎಲ್ಲ ವಿಷಯಗಳಿಂದ ಅಸಮಾಧಾನಗೊಂಡಿರುವ ಈಶ್ವರಪ್ಪ ನಾಳೆ ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಈ ಚುನಾವಣೆಯಲ್ಲಿ ಗೆಲುವು ನನ್ನದೇ, ನಾಳೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೋಪಿಸರ್ಕಲ್ನಲ್ಲಿ ಸಭೆ ನಡೆಸುತ್ತೇನೆ, ನಂತರ ನಾಮಪತ್ರ ಸಲ್ಲಿಸುತ್ತೇನೆ. ನಾಳೆ ನನ್ನ ಕಾರ್ಯಕರ್ತರು, ಅಭಿಮಾನಿಗಳು ಎಲ್ಲರೂ ಸಭೆಗೆ ಆಗಮಿಸಲಿದ್ದಾರೆ.
ನನ್ನ ಮಾತನ್ನು ಹಿಂಪಡೆಯೋದಿಲ್ಲ. ಬೆಂಬಲಿಗರಲ್ಲಿ ಗೊಂದಲ ಬೇಡ, ನಾಳೆ ನಾಮಪತ್ರ ಸಲ್ಲಿಕೆ ಮಾಡೇ ಮಾಡ್ತೇನೆ ಎಂದಿದ್ದಾರೆ.