ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಎಳನೀರುಗುಂಡಿ ಎಸ್ಟೇಟ್ನಲ್ಲಿದ್ದ ಹಳೆಯ ಸಿಮೆಂಟ್ ಶೌಚಗುಂಡಿಗೆ ಆನೆ ಬಿದ್ದು ಮೃತಪಟ್ಟಿದೆ.
ಶುಕ್ರವಾರ ತಡರಾತ್ರಿ ಹೆಣ್ಣು ಕಾಡಾನೆ ಗುಂಡಿಗೆ ಬಿದ್ದಿದೆ, ಆನೆಯ ಮೃತದೇಹವನ್ನು ಹೊರತೆಗೆಯಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಚಂದ್ರಶೇಖರ್ ಎಂಬುವವರಿಗೆ ಈ ತೋಟ ಸೇರಿದ್ದು, ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.