ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ,ಗ್ಯಾರಂಟಿ ಅನುಷ್ಠಾನ ಯೋಜನೆಗಳ ಅಧ್ಯಕ್ಷ ಹೆಚ್.ಎಂ.ರೇವಣ್ಣ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ನಂದಿನಿ ನಾಗರಾಜ್ ನಿನ್ನೆ (ಮಾರ್ಚ್ 17) ಕೆಕೆ ಗೆಸ್ಟ್ ಹೌಸ್ ನಲ್ಲಿ ಇರುವಾಗ ಈ ಘಟನೆ ಆಗಿದೆ. ಇನ್ನು ಈ ಸಂಬಂಧ ನಂದಿನಿ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಮಹಿಳಾ ಆಯೋಗಕ್ಕೂ ಮೊರೆ ಹೋಗಿದ್ದಾರೆ.
ಈ ಹಿಂದೆ ಟೆಂಡರ್ ವಿಚಾರಕ್ಕೆ ಹೆಚ್.ಎಂ.ರೇವಣ್ಣ ಮತ್ತು ಮಹಿಳೆ ಮಧ್ಯೆ ಸ್ವಲ್ಪ ಟಾಕ್ ವಾರ್ ಆಗಿತ್ತು. ಇದೇ ವಿಚಾರವಾಗಿ ಕೆಕೆ ಗೆಸ್ಟ್ ಕ್ಯಾಂಟಿನ್ ನಲ್ಲಿ ಕೂತಿದ್ದ ಮಹಿಳೆ ಬಗ್ಗೆ ರೇವಣ್ಣ ನಿಂದನೆ ಮಾತಾಡಿದ್ದಾರಂತೆ.. ಈ ಬಗ್ಗೆ ಪ್ರಶ್ನೆ ಮಾಡಲು ಹೋದಾಗ ತನ್ನ ಬೆರಳು ಮುರಿದು ಹಲ್ಲೆ ನಡೆಸಿದ್ದಲ್ಲದೇ ನನ್ನ ಕುರಿತು ಜಾತಿ ನಿಂದನೆ ಮಾಡಿದ್ದಾರೆ ಎಂದು ಕೆಲವು ಮೊಬೈಲ್ ವಿಡಿಯೋ ಜೊತೆ ಹೈಗ್ರೌಂಡ್ಸ್ ಠಾಣೆಗೆ ನಂದಿನಿ ನಾಗರಾಜ್ ದೂರು ನೀಡಿದ್ದಾರೆ. ಸದ್ಯ ದೂರು ಸ್ವೀಕರಿಸಿರೋ ಹೈಗ್ರೌಂಡ್ಸ್ ಪೊಲೀಸರು ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ನೀಡುವಂತೆ ಸೂಚಿಸಿದ್ದಾರೆ.
ಮಹಿಳಾ ಆಯೋಗದ ಮೊರೆ ಹೊದ ನಂದಿನಿ
ಇನ್ನು ಪೊಲೀಸರು ಸರಿಯಾಗಿ ಕ್ರಮ ತೆಗೆದುಕೊಳುತ್ತಿಲ್ಲ ಎಂದು ಹೆಚ್.ಎಂ.ರೇವಣ್ಣ ವಿರುದ್ಧ ನಂದಿನಿ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ನಂದಿನಿ ದೂರು ಸ್ವೀಕರಿಸಿದ ಮಾತಾಡಿದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಕಾಂಗ್ರೆಸ್ ಕಾರ್ಯಕರ್ತೆ ಮೇಲೆ H.M.ರೇವಣ್ಣರಿಂದ ಹಲ್ಲೆ ಆರೋಪ ಸಂಬಂಧ ನಂದಿನಿ ಎಂಬುವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಡಿಸಿಪಿಗೆ ಪತ್ರ ಬರೆದು ದೂರಿನ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹೇಳುತ್ತೇವೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡುವಂತಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಹೆಚ್.ಎಂ.ರೇವಣ್ಣ ಆಗಲಿ ಸಾಮಾನ್ಯರು ತಪ್ಪುಮಾಡಿದರೂ ಒಂದೇ. ಹೆಚ್.ಎಂ.ರೇವಣ್ಣಗೆ ಪತ್ರ ಬರೆದು ಅವರ ಪ್ರತಿಕ್ರಿಯೆ ಕೇಳುತ್ತೇವೆ ಎಂದು ತಿಳಿಸಿದ್ದಾರೆ.