ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಹಿನ್ನೆಲೆ ಗಾಯಕಿ ಕಲ್ಪನಾ ರಾಘವೇಂದ್ರ ಅವರು ಆತ್ಮಹತ್ಯೆಗೆ ಯತ್ನಿಸಿರುವ ವದಂತಿಯನ್ನು ನಿರಾಕರಿಸಿದ್ದಾರೆ.
ಕಳೆದ ದಿನಗಳಿಂದ ಮಗಳ ವಿದ್ಯಾಭ್ಯಾಸದ ಬಗ್ಗೆ ಇದ್ದ ಟೆನ್ಷನ್ನಿಂದ ಹೊರಬರಲು ಸಾಧ್ಯವಾಗಲಿಲ್ಲ .ಹೀಗಾಗಿ ನಿದ್ದೆ ಬರದ ಕಾರಣ ಪೊಲೀಸರಿಗೆ ಔಷಧಿಯ ಓವರ್ಡೋಸ್ ತೆಗೆದುಕೊಂಡಿರುವುದಾಗಿ ಗಾಯಕಿ ತಿಳಿಸಿದ್ದಾರೆ.
ಕಲ್ಪನಾ ರಾಘವೇಂದ್ರ ಮತ್ತು ಅವರ ಪತಿ ಕಳೆದ ಐದು ವರ್ಷಗಳಿಂದ ಕೆಪಿಎಚ್ಬಿಯ ನಿಜಾಂಪೇಟ್ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್ 3 ರಂದು ಮಗಳು ಮತ್ತು ಆಕೆಯ ನಡುವೆ ವಿದ್ಯಾಭ್ಯಾಸದ ಬಗ್ಗೆ ಜಗಳವಾಗಿತ್ತು. ತನ್ನ ಮಗಳು ಹೈದರಾಬಾದ್ನಲ್ಲಿ ಓದಬೇಕೆಂದು ಅವರು ಬಯಸಿದ್ದರು, ಆದರೆ ಆಕೆ ಅದಕ್ಕೆ ಒಪ್ಪಲಿಲ್ಲ. ಈ ವಿಷಯಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಕಲ್ಪನಾ ಪೊಲೀಸರಿಗೆ ತಿಳಿಸಿದ್ದಾರೆ.
ಬಹಳ ಪ್ರಯತ್ನ ಪಟ್ಟರೂ ನಿದ್ರೆ ಬರಲಿಲ್ಲ. ನಾನು ಆಗ 8 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡೆ, ಆದರೂ ನಿದ್ದೆ ಬರಲಿಲ್ಲ. ಇದಾದ ನಂತರ ನಾನು 10 ಮಾತ್ರೆಗಳನ್ನು ತೆಗೆದುಕೊಂಡೆ. ಆಗ ನಾನು ನಿದ್ದೆ ಬಂದು ಪ್ರಜ್ಞಾಹೀನಳಾದೆ. ಅದರ ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇನ್ನು ಪೊಲೀಸರ ಹೇಳುವ ಪ್ರಕಾರ, ಕಲ್ಪನಾ ಅವರ ಪತಿ ಪ್ರಸಾದ್ ಕಾಲೋನಿಯ ಕಲ್ಯಾಣ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಅದಕ್ಕೂ ಮೊದಲು ತಮ್ಮ ಹೆಂಡತಿ ಕಲ್ಪನಾ ಅವರಿಗೆ ಕರೆ ಮಾಡಿದಾಗ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಏನೋ ಕೆಟ್ಟದು ಸಂಭವಿಸುವ ಭಯದಿಂದ ಪ್ರಸಾದ್ ನೆರೆಹೊರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆಗ ಕೆಲವರು ಪೊಲೀಸರಿಗೂ ಕರೆ ಮಾಡಿದರು. ಆಗ ಪೊಲೀಸರು ಬಂದು ಮನೆಯ ಬಾಗಿಲು ಮುರಿದು ಗಾಯಕಿ ಇದ್ದ ರೂಮಿನ ಬಳಿ ಹೋಗಿ ಪರಿಶೀಲನೆ ಮಾಡಿದ್ದಾರೆ. ನಂತರ ಅವರು ಮಲಗುವ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗ ಗಾಯಕಿಗೆ ಪ್ರಜ್ಞೆ ಬಂದಿದೆ ಮತ್ತು ತಾನು ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ ಎಂದು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.