ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ ಬಾಸ್ ಸೀಸನ್ 9’ರ ಈ ವಾರದ ಎಲಿಮಿನೇಷನ್ ನಡೆದಿದ್ದು, ಕಿರುತೆರೆ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟಿ ದೀಪಿಕಾ ದಾಸ್ ದೊಡ್ಮನೆಯಿಂದ ಹೊರಬಂದಿದ್ದಾರೆ.
‘ಸೂಪರ್ ಸಂಡೇ ವಿಥ್ ಸುದೀಪ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಎಲಿಮಿನೇಷನ್ ವಿಚಾರ ಘೋಷಿಸಿದರು. ಈ ಮೊದಲು ‘ಬಿಗ್ ಬಾಸ್ ಕನ್ನಡ ಸೀಸನ್ 7’ರಲ್ಲೂ ದೀಪಿಕಾ ದಾಸ್ ಸ್ಪರ್ಧಿಸಿದ್ದರು. ಆಗ ಕೂಡ ಅವರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಅವಕಾಶ ಸಿಕ್ಕರೂ 2ನೇ ಅವಕಾಶದಲ್ಲೂ ಅವರು ಮುಗ್ಗರಿಸಿದ್ದಾರೆ.
9ನೇ ವಾರದಲ್ಲಿ ಬಿಗ್ ಬಾಸ್ ಆಟ ಮುಂದುವರಿದಿದೆ. ಒಟ್ಟು 11 ಸ್ಪರ್ಧಿಗಳು ಈಗ ದೊಡ್ಮನೆಯಲ್ಲಿ ಇದ್ದಾರೆ. ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ಅಮೂಲ್ಯಾ ಗೌಡ, ಕಾವ್ಯಶ್ರೀ ಗೌಡ, ವಿನೋದ್ ಗೊಬ್ಬರಗಾಲ, ಅರುಣ್ ಸಾಗರ್, ರಾಕೇಶ್ ಅಡಿಗ, ಅನುಪಮಾ ಗೌಡ, ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ ನಡುವೆ ಹಣಾಹಣಿ ಮುಂದುವರಿದಿದೆ.