ಹೊಸದಿಗಂತ ವರದಿ ಮಡಿಕೇರಿ:
ಕನ್ನಡ ನಾಡು ನುಡಿಯ ಬಗ್ಗೆ ಕನ್ನಡಿಗರಾದ ನಮಗೆ ಅಪಾರವಾದ ಗೌರವವಿರಬೇಕು; ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ನುಡಿದರು.
ಕೊಡಗು ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ಸಂದರ್ಭ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಕೋಶಾಧಿಕಾರಿ ಕೆ.ತಿಮ್ಮಪ್ಪ, ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಸಿಬ್ಬಂದಿಗಳಾದ ಯಮುನಾ, ಸವಿತಾ, ರಾಜೇಶ್, ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್. ಐ. ಮುನೀರ್, ಕೋಶಾಧಿಕಾರಿ ಎಂ.ಬಿ ಜೋಯಪ್ಪ, ಪದಾಧಿಕಾರಿಗಳಾದ ಭಾರತಿ ರಮೇಶ್, ಶ್ವೇತಾ ರವೀಂದ್ರ, ಮಡಿಕೇರಿ ತಾಲೂಕು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಸದಸ್ಯರಾದ ಅಬ್ದುಲ್ಲಾ, ಶರೀಫ್, ಹೆಚ್.ಎಸ್ ಪ್ರೇಮ್ ಕುಮಾರ್, ಪವಿತ್ರಾ, ಡಿ.ಡಿ.ರಮೇಶ್, ವಿ.ಟಿ.ಮಂಜುನಾಥ್, ಉದ್ಯಮಿಗಳಾದ ಅಶ್ರಫ್, ರಾಮಣ್ಣ, ಲೀಲಾವತಿ ಪುಟಾಣಿಗಳಾದ ಮೌಲ್ಯ ಬಜೆಕೋಡಿ, ತರುಣ್ ಬಜೆಕೋಡಿ, ಚರಿತಾ ಭಾಗವಹಿಸಿದ್ದರು.