ಹೊಸದಿಗಂತ ವರದಿ ವಿಜಯಪುರ:
ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಸನಗೌಡ ಪಾಟೀಲ ಯತ್ನಾಳನ್ನು ಮುಗಿಸಲು ಪ್ರಯತ್ನ ಮಾಡಲಾಗಿತ್ತು. ಆದರೆ, ಅಭಿವೃದ್ಧಿ, ಹಿಂದುತ್ವಕ್ಕೆ ಜಯ ಸಿಕ್ಕಿದೆ ಎಂದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮನೆಯಲ್ಲಿ ಕುಳಿತು ಕಳ್ಳರ ಗ್ಯಾಂಗ್ ಕುತಂತ್ರ ಮಾಡಿದರು. ಬೆಂಗಳೂರು, ಮುಧೋಳದಿಂದ ಯತ್ನಾಳ ಮುಗಿಸಲು ಸಹಾಯ ಹಸ್ತ ಬಂದಿತ್ತು. ಆದರೂ, ಹಿಂದುತ್ವ, ಅಭಿವೃದ್ಧಿಗೆ ಜನತೆ ಜೈ ಎಂದಿದ್ದಾರೆ. ಅಲ್ಲದೇ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ ಎಂದರು.
ಹಿಂದೆ ಯಾವ ಪಾರ್ಟಿಗೂ 17 ಸೀಟ್ ಬಂದಿಲ್ಲ. ಪಕ್ಷೇತರ ಒಬ್ಬರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ಇನ್ನು ಇಬ್ಬರು ಪಕ್ಷೇತರರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ಯಾರದೇ ಮುಲಾಜು ಇಲ್ಲದೇ ಬಿಜೆಪಿಯವರನ್ನೇ ಮೇಯರ್, ಉಪ ಮೇಯರ್ ಮಾಡುತ್ತೇವೆ ಎಂದರು.