ಅಗ್ನಿಪಥ್‌ ಯೋಜನೆಯ ಪ್ರಯೋಜನಗಳ ಬಗ್ಗೆ ಕರ್ನಲ್ ರಾಹುಲ್ ಆರ್ಯ ಏನಂದ್ರು..?

ಹೊಸದಿಗಂತ ವರದಿ ಯಾದಗಿರಿ : 

ಕೇಂದ್ರ ಸರ್ಕಾರವು ಯುವ ಜನಾಂಗದ ಹಿತದೃಷ್ಟಿಯಿಂದ ಹಾಗೂ ಮುಂದಾಲೋಚನೆಯೊಂದಿಗೆ ಭಾರತೀಯ ಭೂ ಸೇನಾ ಪಡೆಯಲ್ಲಿ ನೇಮಕಾತಿಗಾಗಿ ‘ಅಗ್ನಿಪಥ ಯೋಜನೆ’ ಜಾರಿಗೊಳಿಸಿದ್ದು, ಯುವ ಜನಾಂಗ ಇದರ ಸದುಪಯೋಗ ಪಡೆಯಬೇಕೆಂದು ಬೆಳಗಾವಿ, ಆರ್ಮಿ ರಿಕ್ರೂಟಿಂಗ್ ಕಚೇರಿಯ ನಿರ್ದೇಶಕರು ಆದ ಕರ್ನಲ್ ರಾಹುಲ್ ಆರ್ಯ ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ಭಾರತೀಯ ಸೇನಾ ಪಡೆಯಲ್ಲಿ ನೇಮಕಗೊಳ್ಳುವ ಕುರಿತಂತೆ ವಿದ್ಯಾರ್ಥಿಗಳಿಗೆ ಪ್ರೇರಕ ಮಾತುಗಳ ಮೂಲಕ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರವು ಯಾವುದೇ ಯೋಜನೆ ಜಾರಿಗೊಳಿಸುವ ಮುನ್ನ ಮುಂದಾಲೋಚನೆ ಮತ್ತು ಯೋಜನೆಯೊಂದಿಗೆ ಜಾರಿಗೊಳಿಸುತ್ತಿದ್ದು, ‘ಅಗ್ನಿಪಥ ಯೋಜನೆ’ಯು ಇದರ ಭಾಗವಾಗಿದೆ ಎಂದು ಹೇಳಿದರು.

ಈ ಯೋಜನೆಯಿಂದ 17 1/2 ವಯೋಮಾನದ ಕಿರಿಯ ವಯಸ್ಸಿನಲ್ಲಿಯೇ ಯುವ ಜನಾಂಗಕ್ಕೆ ಉದ್ಯೋಗವಕಾಶ ದೊರೆಯುವ ಜೊತೆಗೆ ಕೌಶಲ್ಯ ವೃದ್ಧಿಗೆ ನೆರವಾಗಲಿದೆ ಎಂದು ಹೇಳಿದರು. ಅದರಂತೆ ಆರ್ಥಿಕ ನೆರವು ಜೊತೆಗೆ ಭವಿಷ್ಯದಲ್ಲಿ ಶಿಸ್ತು ಬದ್ಧ ಗೌರವ ಜೀವನಕ್ಕಾಗಿ ಸಹಕಾರಿಯಾಗಲಿದೆ. ಈ ಯೋಜನೆ ಅಡಿ ಆಯ್ಕೆಯಾಗುವ ಪ್ರತಿಶತ 25ರಷ್ಟು ಮೆರಿಟ್ ಆಧಾರದ ಮೇಲಿನ ಅಭ್ಯರ್ಥಿಗಳಿಗೆ ಭಾರತೀಯ ಭೂಸೇನೆಯಲ್ಲಿಯೂ ಮುಂದಿನ ಹುದ್ದೆ ಪಡೆಯಲು ಸಹಕಾರಿ ಯಾಗಲಿದೆ ಎಂದು ಹೇಳಿದರು.

ಯುವಕ, ಯುವತಿಯರಿಗೆ ಈ ಯೋಜನೆ ಜಾರಿಗೊಳಿಸಿದ್ದು , ಕೌಶಲ್ಯ ವೃದ್ಧಿಯಿಂದ ಪ್ಯಾರಾ ಮಿಲಿಟರಿ, ರಾಜ್ಯ ಪೊಲೀಸ್ ಪಡೆ ಮತ್ತು ಭೂಸೇನೆ ಪಡೆಯ ಅಗ್ನಿವೀರ್ ಕೋಟಾದಡಿ ಉದ್ಯೋಗ ಪಡೆಯಲು ಸಹ ನೆರವಾಗಲಿದೆ ಎಂದರು. ಡಿಸೆಂಬರ್‌ 5ರಂದು ಯುವತಿಯರಿಗಾಗಿ ಭೂ ಸೇನಾ ಪಡೆಯ ನೇಮಕಾತಿಗಾಗಿ ನೇಮಕಾತಿ ರ್ಯಾಲಿ ನಡೆಯಲಿದ್ದು,  ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವದರ ಜೊತೆಗೆ ಲಿಖಿತ ಪರೀಕ್ಷೆಗೂ ಸನ್ನದ್ದ ರಾಗಿರುವಂತೆ ತಿಳಿಸಿದರು.

ಅಗ್ನಿವೀರ್ ಹುದ್ದೆಗಳಿಗೆ ವಿದ್ಯಾರ್ಹತೆ ಆಧಾರದ ಮೇಲೆ ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ನರ್ಸಿಂಗ್, ಅಸಿಸ್ಟಂಟ್, ಸಾಮಾನ್ಯ ಟೆಕ್ ಡ್ರೆಸ್ಸರ್, ಅಗ್ನಿವೀರ ಟ್ರೇಡ್ಸ್ಬಮನ್ ಹುದ್ದೆಗಳಲ್ಲಿ ನೇಮಕಾತಿ ನಡೆಯಲಿದೆ. ಅದರಂತೆ ಹವಾಲ್ದಾರ್ ವರ್ಗದ ನರ್ಸಿಂಗ್ ಹವಾಲ್ದಾರ್ ಆರ್ಮಿ ಶಿಕ್ಷಣ ಕಾರ್ಪ್ಸ ಹಾಗೂ ಜೂನಿಯರ್ ಕಮಿಷ್ ನ್ಡ ಆಫೀಸರ್, (ಜೆ ಸಿ ಓ ರೆಲಿಜಿಯಸ್ ಟೀಚರ್) ಜೆ ಸಿ ಓ ಕ್ಯಾಟರಿಂಗ್ ಹುದ್ದೆಗಳಿಗೂ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಯಾದಗಿರಿ ಜಿಲ್ಲೆಯ ಯುವಕ/ ಯುವತಿಯರು ಇದರ ಸದುಪಯೋಗ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಭಾರತೀಯ ಭೂಸೇನಾ ಪಡೆಯ ವೆಬ್ಸೈಟ್ www.indianarmy.nic.in ಗಮನಿಸಬೇಕಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!