ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ.ಪುನೀತ್ರಾಜ್ಕುಮಾರ್ಗೆ ಮರೋಣತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ನಟ ರಜನಿ ಕಾಂತ್ ಅವರು , ಸಿಎಂ ಸಮ್ಮುಖದಲ್ಲಿ ಏಳು ಕೋಟಿ ಕನ್ನಡ ಮಕ್ಕಳಿಗೆ ರಾಜೋತ್ಸವದ ಶುಭಾಶಯಗಳು, ಎಲ್ಲರೂ ಜಾತಿ ಮತಗಳ ಭೇದವಿಲ್ಲದೇ ಎಲ್ಲರೂ ಒಂದಾಗಿ ಇರಲಿ ಅಂತ ಮನವಿ ಮಾಡಿಕೊಂಡರು.
ಪುನೀತ್ ರಾಜ್ಕುಮಾರ್ ಅವರು ದೇವರ ಮಗು, ನಮ್ಮಲ್ಲಿ ಸ್ವಲ್ಪ ದಿನ ಇದ್ದು, ಅವರ ಆತ್ಮ ಇಲ್ಲದೇ ಇದ್ದು, ಅದು ಬಹಳ ದೊಡ್ಡ ಜೀವ. ಮಳೆ ಕಾರಣದಿಂದ ಹೆಚ್ಚು ದಿನ ಮಾತನಾಡಲು ಸಾಧ್ಯವಾಗುತ್ತಿಲ್ಲ, ಮುಂದೆ ಒಂದು ದಿನ ಅಪ್ಪು ಅವರ ಬಗ್ಗೆ ಮಾತನಾಡುವೆ ಅಂತ ಹೇಳಿದರು.
ಈ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್ಕುಮಾರ್ ಕುಟುಂಬದ ಸದ್ಯಸರು, , ಜ್ಯೂ.ಎನ್ಟಿಆರ್ ಸೇರಿದಂತೆ ರಾಜಕೀಯ ನಾಯಕರುಗಳು ಭಾಗವಹಿಸಿದ್ದರು.