ಪಂಜಾಬ್ ತಂಡದ ಮೇಲೆ ಕರ್ನಾಟಕ ಸವಾರಿ: 142 ರನ್ ಗಳ ಮುನ್ನಡೆ

ಹೊಸದಿಗಂತ ವರದಿ ಹುಬ್ಬಳ್ಳಿ:

ದೇವದತ್ತ ಪಡಿಕಲ್‌ ಹಾಗೂ ಮನೀಷ್ ಪಾಂಡೆ ಅವರ (184 ರನ್ 237) ಜೊತೆಯಾಟ ಬಲದಿಂದ ಕರ್ನಾಟಕ ತಂಡ ಪಂಜಾಬ ತಂಡ ಮೇಲೆ ಸವಾರಿ ನಡೆಸಿದೆ. ಇದರ ಮೂಲಕ 142 ರನ್ ಗಳ ಮುನ್ನಡೆ ಸಾಧಿಸಿದೆ.
ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ನ ಸಿ ಗುಂಪಿನ ಮೊದಲ ಲೀಗ್ ಪಂದ್ಯದ ಶನಿವಾರ ಎರಡನೇ ದಿನದಾಟದ ಊಟದ ವೇಳೆಗೆ ಕರ್ನಾಟಕ ತಂಡ ತನ್ನ ಮೂರು ವಿಕೆಟ್ ಕಳೆದುಕೊಂಡು 294 ರನ್ ಗಳಿಸಿದೆ.

ಆರಂಭಿಕ ಆಟಗಾರ ದೇವದತ್ತ ಪಡಿಕಲ್ 183 ಎಸೆತ ಎದುರಿಸಿ 22 ಬೌಂಡರಿ, 1 ಸಿಕ್ಸ್ ಸಹಾಯದಿಂದ 157 ರನ್, ಮನೀಷ ಪಾಂಡೆ 11 ಬೌಂಡರಿ, 2 ಸಿಕ್ಸ್ ರ ಸಹಾದಿಂದ 117 ಎಸೆತ ಎದುರಿಸಿ 86 ರನ್‌ ಗಳಿಸಿದ್ದಾರೆ.
ಇಬ್ಬರು ಆಟಗಾರರು ಅವಕಾಶ ಸಿಕ್ಕಾಗ ಬೌಂಡರಿ, ಸಿಕ್ಸರ ಬಾರಿಸಿದರು. ದೇವದತ್ತ ಪಡಿಕಲ್ 180 ಎಸೆತದಲ್ಲಿ 150 ರನ್ ಗಳಿಸಿ ಪೆವಿಲಿಯನ್ ನತ್ತ ಬ್ಯಾಟ್ ತೊರಿಸಿದರು. ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ಅವರದು 3 ಶತಕವಾಗಿದ್ದು, 150 ಕ್ಕಿಂತ ಹೆಚ್ಚು ರನ್ ಗಳಿಸಿದ 2 ಪಂದ್ಯ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!