ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರುವನ್ನೂರ್ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿಕೆ ಬಿಜು ಅವರನ್ನು ಇಡಿ ಅಧಿಕಾರಿಗಳು ಬರೋಬ್ಬರಿ ಎಂಟು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು, ಮುಂದಿನ ಸೋಮವಾರ ಮತ್ತೆ ಹಾಜರಾಗುವಂತೆ ಸೂಚಿಸಿದ್ದಾರೆ.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ತ್ರಿಶೂರ್ ಜಿಲ್ಲಾ ಕಾರ್ಯದರ್ಶಿ ಎಂ.ಎಂ. ವರ್ಗೀಸ್, ಕೌನ್ಸಿಲರ್ ಪಿ.ಕೆ. ಶಾಜನ್ ಅವರನ್ನೂ ವಿಚಾರಣೆಗೆ ಹಾಜರಾಗಲು ಇಡಿ ಆದೇಶಿಸಿದೆ.
ಕರುವನ್ನೂರ್ ಬ್ಯಾಂಕ್ನಲ್ಲಿ ಸಿಪಿಎಂ ಐದು ರಹಸ್ಯ ಖಾತೆಗಳನ್ನು ಹೊಂದಿದೆ ಎಂದು ಇಡಿ ತನ್ನ ತನಿಖೆಯಲ್ಲಿ ಕಂಡುಕೊಂಡಿತ್ತು. ಬ್ಯಾಂಕ್ನಲ್ಲಿನ ಅಕ್ರಮಗಳು ಹಾಗೂ ಸಿಪಿಎಂ ಹೊಂದಿರುವ ರಹಸ್ಯ ಖಾತೆಗೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಯುತ್ತಿದೆ.