ಹೊಸದಿಗಂತ ವರದಿ ಕಾಸರಗೋಡು:
ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಕೆಲವು ಭಾಗಗಳಲ್ಲಿ ಮಂಗಳವಾರ ಬೆಳಗ್ಗೆ ಭೂಮಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಕರ್ನಾಟಕದ ಗಡಿ ಹೊಂದಿರುವ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪನತ್ತಡಿ, ಕಲ್ಲಾಪಳ್ಳಿ ಪ್ರದೇಶ ಹಾಗೂ ಕಣ್ಣೂರು ಜಿಲ್ಲೆಯ ಚೆರುಪ್ಪುಯ ಪ್ರದೇಶದಲ್ಲಿ ಬೆಳಗ್ಗೆ 7.45ಕ್ಕೆ ಲಘು ಭೂಕಂಪನದ ಅನುಭವವಾಗಿದೆ.
ಜೂ.25ರಂದು ಸುಳ್ಯ ಭಾಗದಲ್ಲಿ ಸಂಭವಿಸಿದ ಅನುಭವಗಿಂತ ದೊಡ್ಡ ಧ್ವನಿಯಲ್ಲಿ ಶಬ್ದ ಕೇಳಿಸಿತ್ತು ಎನ್ನಲಾಗಿದೆ. ಭೂ ಕಂಪನದಿಂದ ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಪ್ರದೇಶಗಳಲ್ಲಿ ಯಾವುದೇ ಬಿರುಕು ಅಥವಾ ಇನ್ನಿತರ ಹಾನಿಗಳು ನಡೆದ ಕುರಿತು ವರದಿಯಾಗಿಲ್ಲ.