ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಚ್ಚಿನಿಂದ ಎಸ್ಐ ಮೇಲೆಯೇ ಪಾತಕಿ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ಕೇರಳದ ಅಲಪ್ಪುಳದಲ್ಲಿ ನಡೆದಿದೆ. ಜೂನ್ 12ರಂದು ನೂರನಾಡ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿ.ಆರ್.ಅರುಣ್ ಕುಮಾರ್ ಗಸ್ತು ತಿರುಗುತ್ತಿದ್ದ ವೇಳೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಸ್ಐ ಕಣ್ಣಿಗೆ ಬಿದ್ದಿದ್ದಾನೆ. ಕೂಡಲೇ ವಾಹನ ನಿಲ್ಲಿಸಿ ಕೆಳಗಿಳಿದ ಅರುಣ್ ಕುಮಾರ್ ಮೇಲೆ ಪಾತಕಿ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದವನನ್ನ ಬರಿಗೈಯಿಂದಲೇ ಮಣಿಸಿ ಆತನನ್ನು ಜೈಲಿಗೆ ಅಟ್ಟಿದ್ದಾರೆ. ಪೊಲೀಸ್ ಅಧಿಕಾರಿ ಧೈರ್ಯ ಸಾಹಸದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಾಗರೀಕರು ಮೆಚ್ಚಿಕೊಂಡಿದ್ದಾರೆ.
Thiruvananthapuram: Video of Sub-Inspector Arun Kumar tackling an attack from a man carrying a machete goes viral
Says, "On June 12, an accused stopped my vehicle & tried to attack me with a machete without any provocation, while I was on patrol duty." pic.twitter.com/pkizhvUc2L
— ANI (@ANI) June 21, 2022