ಹೊಸದಿಗಂತ ವರದಿ,ಕಲಬುರಗಿ:
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖಗೆ೯ ಅವರ ಇಬ್ಬರು ಆಪ್ತರೆ ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್, ಗಳಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅವರು ನಗರದ ಪೋಲಿಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಫಜಲಪುರ ತಾಲೂಕಿನ ಬ್ಲಾಕ್ ಕಾಂಗ್ರೆಸ್, ನ ಅಧ್ಯಕ್ಷ ಮತ್ತು ಅಧ್ಯಕ್ಷನ ಸಹೋದರ ಇಬ್ಬರು ಕೂಡ ಹಗರಣದ ಮೂಲ ಕಿಂಗ್ ಪಿನ್, ಗಳಾಗಿದ್ದಾರೆ ಎಂದರು.
ಶಾಸಕ ಪ್ರಿಯಾಂಕ್ ಖಗೆ೯ ಅವರಿಗೆ ಮೂರನೇ ನೋಟಿಸ್ ಬಂದಿದೆ, ಯಾಕೆ ತನಿಖೆಗೆ ಹಾಜರಾಗಬಾರದು ಎಂದು ಪ್ರಶ್ನಿಸಿದರು. ಇವರ ಬಳಿ ದಾಖಲೆ ಇದ್ದರೆ ಯಾಕೆ ಸಿಐಡಿ ಕೊಡಬಾರದು. ಕೊಟ್ಟು ತನಿಖೆಗೆ ಸಹಕರಿಸಬಹುದು ತಾನೇ ಎಂದು ಹೇಳಿದರು.
ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ. ಎಲರೂ ಸೇರಿ ಈ ಅಕ್ರಮವನ್ನು ಬಯಲಿಗೆ ತರಬೇಕಾಗಿದೆ. ತನಿಖೆಗೆ ಸಹಕರಿಸಿ ಎಂದು ಕೇಳಿಕೊಂಡರು.
ಖಗೆ೯ ಅವರ ಜೊತೆಗೆ ಇದ್ದ ಇಬ್ಬರು ಇಂತಹ ಅಕ್ರಮ ಎಷ್ಟು ವಷ೯ಗಳಿಂದ ಮಾಡುತ್ತಿದ್ದಾರೆ. ದಾಖಲೆ ಇದ್ದರೆ ಕೊಡಲಿ, ಕೇವಲ ಪ್ರಚಾರ ಗಿಟ್ಟಿಸಲು ಆರೋಪ ಮಾಡಬಾರದು ಎಂದು ಹೇಳಿದರು.