ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆದ್ದಿದೆ. ವುಮೆನ್ಸ್ ತಂಡ ಕಪ್ ಗೆದ್ದ ಕಾರಣ ಬಾಯ್ಸ್ ತಂಡದ ಮೇಲೆ ಪ್ರೆಶರ್ ಹೆಚ್ಚಾಗಿದೆ.
ಈ ಬಗ್ಗೆ ನಟ ಕಿಚ್ಚ ಸುದೀಪ ಮಾತನಾಡಿದ್ದಾರೆ. ಸಿಸಿಎಲ್ನಲ್ಲಿ ಕಿಚ್ಚ ಟೀಂ ಫೈನಲ್ನಲ್ಲಿ ಸೋಲು ಅನುಭವಿಸಿದೆ. ಆದರೂ ಆರ್ಸಿಬಿ ಗೆದ್ದ ಖುಷಿಯಿದೆ ಎಂದು ಹೇಳಿದ್ದಾರೆ.
ಇಷ್ಟು ದಿನ ಎಲ್ಲರೂ ಕಪ್ ನಮ್ದೇ ಎಂದು ಹೇಳುತ್ತಿದ್ವಿ, ಇದೀಗ ಕಪ್ ನಮ್ದಾಗಿದೆ. ಅದು ಮಹಿಳಾ ತಂಡದ್ದು. ಈಗ ಪುರುಷರ ತಂಡದ ಮೇಲೆ ಪ್ರೆಶರ್ ಹೆಚ್ಚಾಗಿದೆ. ಬಾಯ್ಸ್ ತಂಡ ಇನ್ನಷ್ಟು ಪ್ರಾಕ್ಟೀಸ್ ಮಾಡಿ ಈ ಬಾರಿ ಕಪ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.