ಉಕ್ರೇನ್‌ ನಲ್ಲಿ ಸಾವಿಗೀಡಾದ ನವೀನ್‌ ಮೃತದೇಹ ಭಾನುವಾರ ತಾಯ್ನಾಡಿಗೆ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉಕ್ರೇನ್‌ನ ಖಾರ್ಕಿವ್‌ನಲ್ಲಿ ರಷ್ಯಾ ದಾಳಿಗೆ ಸಾವಿಗೀಡಾದ ಹಾವೇರಿ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಮೃತದೇಹ ಭಾನುವಾರ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಭಾಗಿಯಾದ ಸಿಎಂ, ರಷ್ಯಾ-ಉಕ್ರೇನ್​ ಸಂಘರ್ಷದ ಮಧ್ಯೆ ಮಾರ್ಚ್​​ 1ರಂದು ರಷ್ಯಾ ನಡೆಸಿದ್ದ ಶೆಲ್​ ದಾಳಿಯಲ್ಲಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದರು. ಭಾನುವಾರ ಸಂಜೆ ಹಾವೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಉಕ್ರೇನ್‌ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ನಿರತರಾದ ಕೇಂದ್ರ ಸರಕಾರ , ನವೀನ್‌ ಮೃತದೇಹ ಭಾರತಕ್ಕೆ ತರಲು ತುಂಬಾ ಪ್ರಯತ್ನ ನಡೆಸುತ್ತಿತ್ತು. ಇದರ ಫಲವಾಗಿ ಮೃತದೇಹ ಇದೀಗ ಭಾರತಕ್ಕೆ ವಾಪಸ್​ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!