ಕ್ಯಾಂಪಸ್‌ನಲ್ಲಿನ ಹತ್ಯೆ ಆತಂಕ ಮೂಡಿಸಿದೆ: ನೇಹಾ ಸಾವಿಗೆ ನಟ ಧ್ರುವ ಸರ್ಜಾ ಕಂಬನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ನಲ್ಲಿ ದಾರುಣವಾಗಿ ಹತ್ಯೆಯಾದ ನೇಹಾ ಹೀರೇಮಠ್‌ ಸಾವಿಗೆ ಸ್ಯಾಂಡಲ್‌ವುಡ್‌ ಸ್ಟಾರ್‌ ಧ್ರುವ ಸರ್ಜಾ ಕಂಬನಿ ಮಿಡಿದ್ದಾರೆ.
ಕಾಲೇಜು ಕ್ಯಾಂಪನ್‌ನಲ್ಲಿ ಆಗಿರುವ ಇಂಥ ಹತ್ಯೆ ಆತಂಕ ಮೂಡಿಸಿದೆ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

‘ಸಹೋದರಿ ನೇಹಾ ಹಿರೇಮಠ್‌ರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್‌ ನಲ್ಲಿನ ಈ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗೂ ಇದನ್ನ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು. ಜೈ ಆಂಜನೇಯ’ ಎಂದು ಧ್ರುವ ಸರ್ಜಾ ಟ್ವೀಟ್‌ ಮಾಡಿದ್ದಾರೆ.

ತನ್ನ ಪ್ರೀತಿಯನ್ನು ನಿರಾಕರಿಸಿದಳು ಎನ್ನುವ ಏಕೈಕ ಕಾರಣಕ್ಕೆ ಮುಸ್ಲಿಂ ಯುವಕ ಫಯಾಜ್‌, ನೇಹಾಳ ಕುತ್ತಿಗೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ಮನಬಂದಂತೆ ಚುಚ್ಚಿದ್ದ. ಒಟ್ಟು 9 ಬಾರಿ ಚಾಕುವಿನಿಂದ ಈತ ಚುಚ್ಚಿದ್ದ ಎನ್ನಲಾಗಿದೆ. ನೇಹಾ ಹೀರೇಮಠ್‌ ಅವರ ತಂದೆ ನಿರಂಜನ್‌ ಹೀರೇಮಠ ಹುಬ್ಬಳ್ಳಿಯ ಕಾಂಗ್ರೆಸ್‌ ಕಾರ್ಪೋರೇಟರ್‌ ಆಗಿದ್ದಾರೆ. ರಾಜಕಾರಣಿಯ ಮಕ್ಕಳಿಗೂ ರಾಜ್ಯದಲ್ಲಿ ಭದ್ರತೆ ಇಲ್ಲದೇ ಇರುವ ವಾತಾವರಣ ನಿರ್ಮಾಣವಾಗಿದೆ. ನೇಹಾ ಹೀರೇಮಠ್‌ ಅವರ ಸಾವಿನ ಬೆನ್ನಲ್ಲಿಯೇ ಸರ್ಕಾರದ ಹಿರಿಯ ಸಚಿವರು ಹಾಗೂ ಸ್ವತಃ ಮುಖ್ಯಮಂತ್ರಿ ಅವರ ಹೇಳಿಕೆಯೂ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!