ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದ ರಾಮ್ಬನ್ ಜಿಲ್ಲೆ ಬನಿಹಾಲ್ ಪ್ರದೇಶದಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಕಾರು ಅಪಘಾತಕ್ಕೀಡಾಗಿದೆ.
ಕಿರಣ್ ರಿಜಿಜು ಅವರು ಕುಳಿತಿದ್ದ ಕಾರು ಹಾಗೂ ಟ್ರಕ್ ಡಿಕ್ಕಿಯಾಗಿದ್ದು, ಸಚಿವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
‘ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಇದೊಂದು ಸಣ್ಣ ಅಪಘಾತವಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಜಮ್ಮು-ಕಾಶ್ಮೀರ ಎಡಿಜಿ ಮುಕೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಸಚಿವರು ಕಪ್ಪು ಬಣ್ಣದ ಸ್ಕಾರ್ಪಿಯೊ ಕಾರ್ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಟ್ರಕ್ನ ಬದಿಗೆ ಕಾರು ಡಿಕ್ಕಿಯಾಗಿದೆ.
Union Minister Kiren Rijiju narrowly escaped, truck hit the car in #JammuandKashmir.. pic.twitter.com/eQX49EJAw2
— Siraj Noorani (@sirajnoorani) April 8, 2023
ಉಧಮ್ಪುರದಿಂದ ಶ್ರೀನಗರಕ್ಕೆ ತೆರಳುದ್ದ ಕಿರಣ್ ರಿಜಿಜು ಅವರು ಅಪಘಾತಕ್ಕೂ ಮೊದಲು ವಿಡಿಯೊ ಪೋಸ್ಟ್ ಮಾಡಿದ್ದಾರೆ. ‘ಉಧಮ್ಪುರದಿಂದ ಶ್ರೀನಗರದಿಂದ ತೆರಳುವಾಗ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸುರಂಗ ಮಾರ್ಗವಾಗಿ ತೆರಳುತ್ತಿದ್ದೇನೆ. ಹೆದ್ದಾರಿ ನಿರ್ಮಾಣದಲ್ಲಿ ಭಾರಿ ಸುಧಾರಣೆಯಾಗಿದೆ’ ಎಂದು ಟ್ವೀಟ್ ಮಾಡಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.