ಹೊಸದಿಗಂತ ಡಿಜಿಟಲ್ ಡೆಸ್ಕ್
ಕಿರ್ಪಾ ಸಿಂಗ್ ಹೋಶಿಯಾರ್ಪುರ ಜಿಲ್ಲೆಗೆ ಸೇರಿದವರು. ಅವರ ತಂದೆಯ ಹೆಸರು ಜವಾಹರ್ ಸಿಂಗ್.
ಕಿರ್ಪಾ ಸಿಂಗ್ ಬ್ರಿಟಿಷ್ ಸೇನೆಯ 26ನೇ ಪಂಜಾಬಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಬೆಟಾಲಿಯನ್ ಅನ್ನು ಹಾಂಗ್ ಕಾಂಗ್ ಗೆ ಕಳುಹಿಸಲಾಯಿತು. ಅಲ್ಲಿ, ಅವರು ಗದರ್ ಪಕ್ಷದ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದರು ಮತ್ತು ಅವರೊಂದಿಗೆ ಸೇರಿಕೊಂಡರು. ಆ ಬಳಿಕ ಅವರು ತಮ್ಮ ಬ್ರಿಟೀಷ್ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸಲಾರಂಭಿಸಿದರು. ಅವರು ಬೆಟಾಲಿಯನ್ ತೊರೆದರು. ಭಾರತಕ್ಕೆ ಹಿಂದಿರುಗಿದ ನಂತರ, ಅವರು ಕರ್ತಾರ್ ಸಿಂಗ್ ಸರಭಾ ಮತ್ತು ಇತರ ಗದರ್ ಚಳುವಳಿಯ ನೇತಾರರನ್ನು ಸೇರಿದರು. 1915 ಫೆಬ್ರವರಿ 19 ರಂದು ಗದರ್ ಪಕ್ಷವು ದಂಗೆಯನ್ನು ಪ್ರಾರಂಭಿಸಲು ನಿರ್ಧರಿಸಿದಾಗ, ಅವರು ಅವರೊಂದಿಗೆ ಸೇರಿಕೊಂಡರು. ಆದರೆ ಬ್ರಿಟಿಷರಿಗೆ ಸಂಪೂರ್ಣ ಯೋಜನೆ ತಿಳಿಯುತ್ತಿದ್ದಂತೆ ಆ ಯೋಜನೆ ಸಾಕಾರಗೊಳ್ಳಲಿಲ್ಲ. ಕಿರ್ಪಾ ಸಿಂಗ್ ರನ್ನು ಪೊಲೀಸರು ಬಂಧಿಸಿದರು. ಲಾಹೋರ್ ಪಿತೂರಿ ಪ್ರಕರಣದಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅವರು 3 ಜೂನ್ 1932 ರಂದು ಜೈಲಿನಿಂದ ಬಿಡುಗಡೆಯಾದರು. ನಂತರ ಅವರು ತಮ್ಮ ಹಳ್ಳಿಯ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಸಕ್ರಿಯರಾಗಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ