ಪೊಲೀಸರ ಲಾಠಿ ಚಾರ್ಜ್‌ ಖಂಡಿಸಿ ಕೊಲ್ಹಾಪುರ ಬಂದ್‌: ಕೆಎಸ್‌ಆರ್‌ಟಿಸಿ ಸಂಚಾರ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಾವು ಹೆಚ್ಚಾಗಿದೆ. ಮೀಸಲಾತಿಗಾಗಿ ಮರಾಠಾ ಸಮುದಾಯದ ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಜಾರ್ಚ್‌ ನಡೆಸಿರುವ ಘಟನೆ ಜಲ್ನಾ ಜಿಲ್ಲೆಯಲ್ಲಿ ನಡೆದಿದ್ದು, ಲಾಠಿ ಚಾರ್ಜ್‌ ಖಂಡಿಸಿ ಇಂದು ಕೊಲ್ಹಾಪುರ ಬಂದ್‌ ಮಾಡಲಾಗಿದೆ. ಪ್ರತಿಭಟನಾಕಾರು ನಿರ್ಮಿಸಿಕೊಂಡಿದ್ದ ಟೆಂಟ್‌ಗೂ ಪೊಲೀಸರು ಮುತ್ತಿಗೆ ಹಾಕಿ ಲಾಠಿ ಚಾರ್ಜ್‌ ಮಾಡಿದ್ದರು.

ಇದರಿಂದ ರೊಚ್ಚಿಗೆದ್ದ ಮರಾಠ ಸಮುದಾಯ ಇಂದು ಕೊಲ್ಹಾಪುರ ಬಂದ್‌ಗೆ ಕರೆ ಕೊಟ್ಟಿದೆ. ಪರಿಸ್ಥಿತಿ ತೀವ್ರ ಹದೆಗಟ್ಟಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯದಿಂದ ಕೊಲ್ಹಾಪುರಕ್ಕೆ ತೆರಳುವ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಕೊಲ್ಹಾಪುರ ನಗರದಲ್ಲಿ ಬೆಳಗ್ಗೆಯಿಂದಲೇ ಎಲ್ಲಾ ಅಂಗಡಿ-ಮುಂಗಟ್ಟುಗಳು ಕೊಳಸ್‌ ಆಗಿದ್ದು, ವಾಹನ ಸಂಚಾರ ಕೂಡ ನಿರ್ಬಂಧಿಸಲಾಗಿದೆ.

ಪ್ರತಿಭಟನೆ ಕೈ ಮೀರಿದ ಹಿನ್ನೆಲೆ ಸಿಎಂ ಏಕನಾಥ ಶಿಂಧೆ ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿ, ಮರಾಠಾ ಮೀಸಲಾತಿ ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!