ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು ಆಲ್ರೌಂಡರ್ ವನಿದು ಹಸರಂಗ ಮಾರಕ ಬೌಲಿಂಗ್ ದಾಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟಿಂಗ್ ನಲ್ಲಿ ಎಡವಿದ್ದು, ಬೆಂಗಳೂರು ಗೆಲುವಿಗೆ 129 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ ಪಡೆ, ವೆಂಕಟೇಶ್ ಅಯ್ಯರ್(10) ಹಾಗೂ ರಹಾನೆ(9) ಮೊದಲ ಮೂರು ಓವರ್ಗಳಲ್ಲೇ ವಿಕೆಟ್ ಕಳೆದುಕೊಂಡರು. ಬಳಿಕ ಯಾವುದೇ ಆಟಗಾರ ಹೇಳಿಕೊಳ್ಳುವಂತಹ ಆಟ ಪ್ರದರ್ಶನ ನೀಡಲಿಲ್ಲ. ಕ್ಯಾಪ್ಟನ್ಅಯ್ಯರ್(13), ನಿತೀಶ್ ರಾಣಾ(10), ಸುನಿಲ್ ನರೈನ್(12), ಬಿಲ್ಲಿಂಗ್ಸ್(14)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ಬಾಲಂಗೋಚಿಗಳಾದ ಉಮೇಶ್ ಯಾದವ್(18), ವರುಣ್ ಚಕ್ರವರ್ತಿ(10) ಕೊನೆಯಲ್ಲಿ ಅಲ್ಪಮಟ್ಟದ ವಿರೋಧ ತೋರಿದ್ದರಿಂದ ಕೆಕೆಆರ್ ತಂಡ 18.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 128ರನ್ಗಳಿಕೆ ಮಾಡಿದೆ.