ದಿನಭವಿಷ್ಯ| ಈ ರಾಶಿಯವರಿಗೆ ಎದುರಾಗಿರುವ ಅಡ್ಡಿ-ಆತಂಕಗಳು ತಾನಾಗಿಯೇ ನಿವಾರಣೆಯಾಗಲಿವೆ

ಮೇಷ
ತೃಪ್ತಿಕರ ದಿನ. ನಿಮ್ಮ ಬೆಳವಣಿಗೆ ಇಂದು ಸಂತೃಪ್ತಿ ತರುತ್ತದೆ. ಕೆಲವು ಅಡ್ಡಿಗಳು ತಾವಾಗಿ ನಿವಾರಣೆ ಆಗುತ್ತವೆ. ಕೌಟುಂಬಿಕ ಸಮಾಧಾನ.

ವೃಷಭ
ನಯವಂಚಕರು ನಿಮ್ಮ ಜತೆಗೇ ಇರಬಹುದು. ಹಾಗಾಗಿ ಯಾರನ್ನೂ ಅಂಧರಾಗಿ ನಂಬಬೇಡಿ. ಚಾಡಿ ಮಾತುಗಳನ್ನು ಪರಾಮರ್ಶಿಸಿ ನೋಡುವುದೊಳಿತು.

ಮಿಥುನ
ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕು. ಇದನ್ನು ನೀವು ಅರಿತುಕೊಳ್ಳುವ ಪ್ರಸಂಗ ಒದಗುವುದು. ಹಳೆಯ ನಿಲುವಿಗೆ ಅಂಟಿಕೊಂಡು ಕೂರದಿರಿ.

ಕಟಕ
ಕೆಲವು ಕಾರಣಗಳಿಗಾಗಿ ನೀವು ಭಾವುಕರಾಗಿ ವರ್ತಿಸುವಿರಿ. ಆದರೆ ನಿಮ್ಮ ಭಾವನೆ ನಿಯಂತ್ರಣ ಮೀರಲು ಅವಕಾಶ ಕೊಡದಿರಿ. ಜಗಳಕ್ಕೆ ಹೋಗದಿರಿ.

ಸಿಂಹ
ಕೌಟುಂಬಿಕ ಬದುಕು ಮತ್ತು ವೃತ್ತಿ ಬದುಕಿನ ಮಧ್ಯೆ ಹೊಂದಾಣಿಕೆ, ಸಮತೋಲನ ಸಾಧಿಸಿ. ಇಲ್ಲವಾದರೆ ಎರಡೂ ಕಡೆಗಳಲ್ಲೂ ಅಸಂತೃಪ್ತಿ ಉಂಟಾದೀತು.

ಕನ್ಯಾ
ನೆಗೆಟಿವ್ ಚಿಂತನೆಗಳನ್ನು ಹೊರದೂಡಿ. ಇದರಿಂದ ನಿಮ್ಮ ಒತ್ತಡವು ಕಡಿಮೆಯಾಗುವುದು. ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸಿ ಮನ ಕೆಡಿಸಿಕೊಳ್ಳದಿರಿ.

ತುಲಾ
ನಿಮ್ಮ ಬದಲಾದ ಮನೋಭಾವವು  ಉತ್ತಮ ಫಲಿತಾಂಶ ತರಲಿದೆ. ನಿಮಗೆ ಹಿತಕರ ಎನಿಸುವಂತಹ ನಿರ್ಧಾರ ತಳೆಯಲು ಹಿಂಜರಿಯದಿರಿ.

ವೃಶ್ಚಿಕ
ಖಾಸಗಿ ಬದುಕಿಗೆ ಹೆಚ್ಚು ಗಮನ ಕೊಡಬೇಕಾದ ಪರಿಸ್ಥಿತಿ ಒದಗುವುದು. ವೈಯಕ್ತಿಕ ಹಿತಾಸಕ್ತಿ ಬಲಿಗೊಟ್ಟು ವ್ಯವಹರಿಸದಿರಿ. ಆರ್ಥಿಕ ಒತ್ತಡ ಕಾಡಲಿದೆ.

ಧನು
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯಗಳನ್ನು ಮೊದಲು ಇತ್ಯರ್ಥ ಪಡಿಸಿಕೊಳ್ಳಿ. ಅನ್ಯ ವಿಚಾರಗಳಲ್ಲಿ ತಲೆ ತೂರಿಸದಿರಿ.

ಮಕರ
ಇಂದು ಅಶಾಂತಿ ಕಾಡುವುದು. ಕೆಲಸದ ಒತ್ತಡ ಅಥವಾ ದೈಹಿಕ ನೋವು ಅದಕ್ಕೆ ಕಾರಣವಾಗುವುದು. ಸ್ವಲ್ಪ ಮಟ್ಟಿನ ವಿಶ್ರಾಂತಿ ನಿಮಗೆ ಅವಶ್ಯ.

ಕುಂಭ
ಬಿಡುವಿಲ್ಲದ ಕಾರ್ಯ ದಿಂದ ವಿರಾಮ ಬಯಸುವಿರಿ. ಕುಟುಂಬ ಸದಸ್ಯರು ನಿಮ್ಮ ಸಮಸ್ಯೆಗೆ ಕಾರಣರಾಗುವರು. ಆರ್ಥಿಕ ಒತ್ತಡ.

ಮೀನ
ಆದ್ಯತೆಯ ವಿಷಯಕ್ಕೆ ಮೊದಲು ಗಮನ ಕೊಡಿ. ನಿಮ್ಮ ಮನಸ್ಸು ತೋಚಿದಂತೆ ನಡಕೊಳ್ಳಬೇಡಿ. ಅದು ನಿಮ್ಮ ಹಿತಾಸಕ್ತಿಗೆ ಕುಂದು ತಂದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!