ಕೊಪ್ಪಳ | ಶೀಘ್ರವೇ ಚಿತ್ತಾಪುರದ ಕಡೆ ನಮ್ಮ ನಡೆ: ವಾಣಿಶ್ರೀ

ಹೊಸದಿಗಂತ ವರದಿ ಕೊಪ್ಪಳ:

ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡಿಸಿ ಚಿತ್ತಾಪುರದ ಕಡೆ ನಮ್ಮ ನಡೆ ಘೋಷವಾಕ್ಯದೊಂದಿಗೆ ಚಿತ್ತಾಪುರದಲ್ಲಿ ಶೀಘ್ರವೇ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾಣಿಶ್ರೀ ಹಿರೇಮಠ ಹೇಳಿದರು.

ನಗರದ ಮೀಡಿಯಾ ಕ್ಲಬ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು. ಚಿತ್ತಾಪುರದ ಕಡೆ ನಮ್ಮ ನಡೆ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲು ಇನ್ನು ದಿನಾಂಕ ನಿಗದಿ ಪಡಿಸಿಲ್ಲ. ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರು ಇನ್ನರೆಡು ದಿನದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಪ್ರತಿಭಟನೆ ಗೆ ಜಿಲ್ಲಾಕೇಂದ್ರದಿಂದ 30 ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.
ಮಹಿಳಾ ಮೋರ್ಚಾದ ಜಿಲ್ಲಾ ಸಂಚಾಲಕಿ ಸುನಂದ ಹಂಚಿನಾಳ, ಪ್ರಧಾನ ಕಾರ್ಯದರ್ಶಿ ಗೀತಾ, ಖಜಾಂಚಿ ಕೀರ್ತಿ, ರಾಜ್ಯ ಕಾರ್ಯಕಾರಣಿ ಸದಸ್ಯೆ ಶೋಭಾರಾಣಿ, ಸೇರಿ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!