ಹೊಸದಿಗಂತ ವರದಿ ತಾವರಗೇರಾ:
ಶ್ರೀಶಶಿಧರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕೋಟಿ ಕಂಠ ಗಾಯನ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಭಾವಗೀತೆ ಗಳನ್ನು ಹಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಯ್ಯ ಹಿರೇಮಠ, ಉಪಾನ್ಯಾಸಕ ವೆಂಕೋಬ ಶಿರಗುಡ್ಡಿ, ಕೊಟ್ರೇಶ್ ಎಸ್., ಪ್ರಕಾಶ್ ಜಿ., ರಾಜಶೇಖರ ರೆಡ್ಡಿ, ಚನ್ನಬಸವ, ಉಪನ್ಯಾಸಕಿ ಡಾ.ಭಾರತಿ, ಅಕ್ಕಮಹಾದೇವಿ ಕೊಟ್ಟೂರು ಶೆಟ್ಟರ್, ಕಾವ್ಯ ಸೇರಿ ತಾವರಗೇರಾ ಶಿಕ್ಷಣ ಸಂಸ್ಥೆ ತಾವರಗೇರಾದ ಎಲ್ಲ ಅಂಗ ಸಂಸ್ಥೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.