ಹೊಸದಿಗಂತ ವರದಿ,ಶಿವಮೊಗ್ಗ:
ಮಾಜಿ ಉಪಮುಖ್ಯಮಂತ್ರಿ , ಹಾಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಕೆ.ಈ ಕಾಂತೇಶ್ ಸುದ್ದಿ ವಾಹಿನಿಗಳು, ಮುದ್ರಣ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ದ ಯಾವುದೇ ರೀತಿಯ ಮಾನಹಾನಿ ವರದಿ ಮಾಡದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ಪಡೆದುಕೊಂಡಿದ್ದಾರೆ.
ವಕೀಲರಾಧ ಎಂ ವಿನೋದ್ ಕುಮಾರ್ ಅವರ ಮೂಲಕ ಕೆ.ಈ ಕಾಂತೇಶ್ ಬೆಂಗಳೂರಿನ ಸಿಸಿಹೆಚ್11 6ನೇ ಸಿಟಿಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ಓಎಸ್ ೩೨೨೪,೨೦೨೪ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 50 ಸುದ್ದಿ ಮಾಧ್ಯಮಗಳಿಗೆ ನೊಟೀಸ್ ಜಾರಿಗೊಳಿಸಿ ಕೆ.ಈ ಕಾಂತೇಶ್ ಅವರ ವಿರುದ್ದ ಯಾವುದೇ ರೀತಿಯ ಮಾನ ಹಾನಿ ವರದಿಗಳನ್ನು ಪ್ರಕಟಿಸಬಾರದು,ವಿಡಿಯೋಗಳನ್ನು ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಜಾರಿ ಮಾಡಿದೆ .