ಹೊಸ ದಿಗಂತ ವರದಿ, ನಂಜನಗೂಡು:
ಕೆಎಸ್ಆರ್ಟಿಸಿ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ನಗರದ ಚಾಮುಂಡಿ ಟೌನ್ಶಿಪ್ ಬಳಿ ಜರುಗಿದೆ.
ಚಾಮಲಾಪುರಹುಂಡಿ ಬಡಾವಣೆಯ ಮಾಲಯ್ಯ(77) ಮೃತ ದುರ್ದೈವಿ.
ಮಾಲಯ್ಯ ಕುಟುಂಬದವರು ಮನೆ ನಿರ್ಮಿಸುತ್ತಿದ್ದು , ಮನೆ ಕಟ್ಟಡವವನ್ನು ವೀಕ್ಷಿಸುವುದಕ್ಕಾಗಿ ತೆರಳಿದ್ದರು. ಈ ವೇಳೆಯಲ್ಲಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೇಳೆ ಮೈಸೂರಿನಿಂದ ನಂಜನಗೂಡು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಾಲಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಸಂಚಾರ ಪೊಲೀಸ್ ಠಾಣೆಯ ಪಿಎಸೈ ಜಯಪ್ರಕಾಶ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ, ನಡೆಸಿ ಬಸ್ನ್ನು ವಶಕ್ಕೆ ಪಡೆದು ತನಿಖೆ ಮುಂದುಯವರೆಸಿದ್ದಾರೆ. ಈ ಸಂಬoಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.