ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಮಂಗಳವಾರ ಸಂಜೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಕುಟುಂಬ ಸಮೇತರಾಗಿ ಭೆಟಿ ನೀಡಿದರು.
ರಾಜ್ಯಪಾಲರಾದ ಗೆಹ್ಲೋಟ್ ಅವರನ್ನು ಶ್ರೀ ದೇವಳದ ಗಜರಾಣಿ ಯಶಸ್ವಿಯು ಸೊಂಡಿಲಿನಿಂದ ನಮಸ್ಕರಿಸಿ ಸ್ವಾಗತಿಸಿತು.ಬಳಿಕ ರಾಜ್ಯಪಾಲರ ತಲೆ ಮೇಲೆ ತನ್ನ ಸೊಂಡಿಲನ್ನು ಇರಿಸಿ ಆಶೀರ್ವದಿಸಿತು.
ಈ ಸಂದರ್ಭ ಅವರ ಪತ್ನಿ ಅನಿತಾ ಗೆಹ್ಲೋಟ್, ಮೊಮ್ಮಕ್ಕಳಾದ ದೀರಜ್ ಗೆಹ್ಲೋಟ್, ರಜನಿ ಗೆಹ್ಲೋಟ್, ಪ್ರಮುಖರಾದ ರವಿಕುಮಾರ್ ಎಂ.ಆರ್, ಮೋಹನರಾಂ ಸುಳ್ಳಿ, ಡಾ.ನಿಂಗಯ್ಯ, ಡಾ.ಕುಮಾರ್, ವಿಕ್ರಮ್ ಅಮ್ಟೆ ಉಪಸ್ಥಿತರಿದ್ದರು.