ಕುಶಾಲನಗರ | ಕಾವೇರಿ‌ ನದಿಯಲ್ಲಿ ಮೃತದೇಹ ಪತ್ತೆ

ಹೊಸದಿಗಂತ ವರದಿ, ಕುಶಾಲನಗರ:

ಕುಶಾಲನಗರ ತಾಲ್ಲೂಕಿನ ಕಣಿವೆ ತೂಗುಸೇತುವೆ ಬಳಿ ಕಾವೇರಿ‌ ನದಿಯಲ್ಲಿ ಗುರುವಾರ ವ್ಯಕ್ತಿ ಯೋರ್ವನ‌ ಮೃತದೇಹ ಪತ್ತೆಯಾಗಿದೆ. ಇತ್ತೀಚೆಗೆ ಕಾಣೆಯಾದ ಕುಶಾಲನಗರದ ಬಸವೇಶ್ವರ ಬಡಾವಣೆ ನಿವಾಸಿ ಮಾರುಕಟ್ಟೆ ರಸ್ತೆಯಲ್ಲಿರುವ ಮೂಕಾಂಬಿಕ‌ ಆಟೋಮೊಬೈಲ್ಸ್ ಮಾಲೀಕ ಹೇಮಪ್ರಸಾದ್ (40) ಎಂಬವರ ಮೃತದೇಹ ಎಂದು ತಿಳಿದುಬಂದಿದೆ. ಹಣಕಾಸಿನ‌ ವ್ಯವಹಾರದಿಂದ ಬೇಸತ್ತಿದ್ದ ಹೇಮಪ್ರಸಾದ್ ಆ.21 ರಂದು ಮನೆಯಿಂದ ತೆರಳಿದವರು‌ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದ್ದು ಕೈಕಾಲುಗಳು, ಬಾಯಿಯನ್ನು ಪ್ಲಾಸ್ಟರ್ ನಿಂದ ಬಿಗಿದಿರುವ ಸ್ಥಿತಿಯಲ್ಲಿ ದೊರೆತಿದೆ. ಮೃತನ ಪತ್ನಿ
ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತನ‌ ಹುಟ್ಟೂರು ಭಾಗಮಂಡಲದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಂತಾಪ: ಮೃತರಿಗೆ ಕುಶಾಲನಗರ ವರ್ಕ್ ಶಾಪ್ ಮಾಲೀಕರು, ಕಾರ್ಮಿಕರ ಸಂಘದಿಂದ ಸಂತಾಪ ಸೂಚಿಸಲಾಯಿತು. ವರ್ಕ್ ಶಾಪ್ ಗಳನ್ನು ಮುಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!