Sunday, December 3, 2023

Latest Posts

ವರ್ಷದ ಕೊನೆಯ ಚಂದ್ರಗ್ರಹಣ: ಪ್ರಮುಖ ದೇವಾಲಯಗಳು ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಈ ವರ್ಷದ ಕಡೆಯ ಚಂದ್ರಗ್ರಹಣ ಗೋಚರವಾಗಲಿದ್ದು, ದೇಶದ ಪ್ರಮುಖ ದೇಗುಲಗಳು ಬಂದ್ ಆಗಲಿವೆ.

ತಿರುಪತಿ ತಿಮ್ಮಪ್ಪದ ದರುಶನಕ್ಕೆ ತೆರಳುವವರು ರಾತ್ರಿ 7 ಗಂಟೆಯ ಒಳಗೇ ತೆರಳಿ, ರಾತ್ರಿ 7 ರಿಂದ ಬೆಳಗಿನ ಜಾವ 3:15 ರವರೆಗೆ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ.

Tirupati temple's annual contribution to Andhra government hiked to Rs 50  crore from Rs 2.5 crores - The New Indian Expressಇನ್ನು ಕರ್ನಾಟಕದ ಪ್ರಮುಖ ದೇಗುಲಗಳೂ ಗ್ರಹಣ ಸಮಯದಲ್ಲಿ ತೆರೆದಿರುವುದಿಲ್ಲ. ಉಡುಪಿಯ ಶ್ರೀಕೃಷ್ಣ ಮಠ ಸಂಜೆ 4 ಗಂಟೆ ನಂತರ ಬಂದ್ ಆಗಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಾಗಿಲು ಸಂಜೆ 6:30ಕ್ಕೆ ಮುಚ್ಚಲಾಗುತ್ತದೆ.

Udupi Shri Krishna on X: "Udupi Sri Krishna, Mukhyąprāña Darshanam  30-08-2023 https://t.co/jsIpIZo15Q" / Xಇನ್ನು ಗೋಕರ್ಣದಲ್ಲಿ ಗ್ರಹಣದ ಸಮಯದಲ್ಲಿಯೇ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ ನೀಡಲಾಗಿದೆ. ಸವದತ್ತಿಯ ಯಲ್ಲಮ್ಮ ದೇಗುಲದಲ್ಲಿ ಎಂದಿನಂತೆ ದೇವಿ ದರುಶನಕ್ಕೆ ಅವಕಾಶ ನೀಡಲಾಗಿದೆ.

TEMPLES AND BEACHES IN GOKARNA – Namaste Retreats Greeceಸಂಜೆ 6 ಗಂಟೆ ನಂತರ ಚಾಮುಂಡಿ ಬೆಟ್ಟ ಬಂದ್ ಆಗಲಿದ್ದು, ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಸಂಜೆ 5 ಗಂಟೆಗೆ ತೆಪ್ಪೋತ್ಸವ ನೆರವೇರಿಸಿ ನಂತರ ಭಕ್ತರಿಗೆ ಪ್ರವೇಶ ನಿಷೇಧಿಸಲಾಗುತ್ತದೆ.

The Chamundi Betta, Mysuru – Banjaran Foodieರಾಜಧಾನಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲವನ್ನು ಬೆಳಗ್ಗೆ 11 ಗಂಟೆ ನಂತರ ಬಂದ್ ಮಾಡಲಾಗುತ್ತದೆ.

Sunrays keep their date with the cave temple

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!