ರಾಜ್ಯಸಭೆಯಲ್ಲಿ ಲತಾ ಮಂಗೇಶ್ಕರ್‌ಗೆ ನಮನ: ಗೌರವಾರ್ಥವಾಗಿ ಒಂದು ಗಂಟೆ ಕಲಾಪ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಇಹಲೋಕ ತ್ಯಜಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ರಾಜ್ಯಸಭೆ ಅಧಿವೇಶನದಲ್ಲಿ ಮೌನಾಚರಣೆ ಮೂಲಕ ನಮನ ಸಲ್ಲಿಸಲಾಗಿದೆ.

ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಮೊದಲು ಲತಾ ಮಂಗೇಶ್ಕರ್ ಅವರಿಗೆ ನಮನ ಸಲ್ಲಿಸಿ ನಂತರ ಗೌರವಾರ್ಥವಾಗಿ ಒಂದು ಗಂಟೆ ಕಾಲ ಸದನ ಮುಂದೂಡಲಾಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ಲತಾ ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿದಿದ್ದು, ಎರಡು ದಿನ ಶೋಕಾಚರಣೆ ಘೋಷಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!