ಹೊಸದಿಗಂತ ವರದಿ ಹಾಸನ :
ಮಾರಕಾಸ್ತ್ರಗಳಿಂದ ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ಈಶ್ವರಹಳ್ಳಿ ಕೂಡಿಗೆ ಬಳಿ ನಡೆದಿದೆ.
ರಂಗೇನಹಳ್ಳಿ ಗ್ರಾಮದ ದುಷ್ಯಂತ್ (40) ಹಲ್ಲೆಗೊಳಗಾದ ವಕೀಲ. ವಕೀಲ ವೃತ್ತಿ ಜೊತೆಗೆ ಫೈನಾನ್ಸ್ ನೀಡುತ್ತಿದ್ದ ದುಷ್ಯಂತ್ ನಿನ್ನೆ ರಾತ್ರಿ KA-46-L-4087 ನಂಬರ್ನ ಬೈಕ್ ರಂಗೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಮಾರಕಾಸ್ತ್ರ ಹಿಡಿದು ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ವಕೀಲರ ಮೇಲೆ ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ದುಷ್ಯಂತ್ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.