ನನ್ನನ್ನ ಒಂಟಿಯಾಗಿ ಬಿಟ್ಬಿಡಿ, ಆ ರೇಸ್‌ನಲ್ಲಿ ನಾನಿಲ್ಲ: ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಯಾಕೆ ಹಿಂಗೇ ಅಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾಉತ್ತಮ ಸಕ್ಸಸ್‌ ಆಗುತ್ತಿದ್ದು, ಬ್ರಹ್ಮಾಸ್ತ್ರ ಬಾಯ್ಕಟ್ ಎಂಬ ಘೋಷಣೆ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಗೆದ್ದು ಬೀಗಿದೆ.

ಬಾಕ್ಸ್ ಆಫೀಸ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ 300 ಕೋಟಿ ಬಾಚಿಕೊಂಡಿದೆ. ಇದು ಬಾಲಿವುಡ್ ಗೆ ಹೊಸ ಚೈತನ್ಯ ತುಂಬಿದೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಳಿಕ ಬಾಲಿವುಡ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಬ್ರಹ್ಮಾಸ್ತ್ರವಾಗಿದೆ. ವಿವೇಕ್ ಅಗ್ನಿಹೋತ್ರಿ ಅರ ಕಾಶ್ಮೀರ್ ಫೈಲ್ಸ್ ಸಿನಿಮಾದ ಕಲೆಕ್ಷನ್ ಬೀಟ್ ಮಾಡಿದೆ ಮುನ್ನುಗ್ಗುತ್ತಿದೆ.

ಆದರೆ ಒಂದೆಡೆ ಬ್ರಹ್ಮಾಸ್ತ್ರ ಕಲೆಕ್ಷನ್ ಬಗ್ಗೆ ಅನೇಕರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಕಂಗನಾ ರಣಾವತ್ ಸೇರಿದಂತೆ ಅನೇಕರು ಫೇಕ್ ಕಲೆಕ್ಷನ್ ಎಂದು ಆರೋಪ ಮಾಡಿದ್ದಾರೆ.

ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ಆ ಸಿನಿಮಾ ಹೇಗೆ ಕಾಶ್ಮೀರ್ ಫೈಲ್ಸ್ ಬೀಟ್ ಮಾಡಿದೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಆ ರೇಸ್ ನಲ್ಲಿ ಇಲ್ಲ, ನಮ್ಮನ್ನು ಬಿಟ್ಬಿಡಿ ಎಂದು ಅಗ್ನಿಹೋತ್ರಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಶ್ಮಿಕಾ ಫೈಲ್ಸ್ ಸಿನಿಮಾದ ಕಲೆಕ್ಷನ್ ಬೀಟ್ ಮಾಡಿದೆ ಎಂದಿರುವ ಒಂದಿಷ್ಟು ಆರ್ಟಿಕಲ್‌ಗಳ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ.

‘ಹಾಹಾಹಾ..ಅವರು ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಹೇಗೆ ಬೀಟ್ ಮಾಡಿದರು ನನಗೆ ಗೊತ್ತಿಲ್ಲ. ದೊಣ್ಣೆ, ಹಾಕಿ ಸ್ಟಿಕ್, ಎಕೆ47 ಅಥವಾ ಹಣನೀಡಿ, ಪ್ರಭಾವಿಗಳಿಂದ ಸೋಲಿಸಿದ್ದಾರಾ? ನನಗೆ ಗೊತ್ತಿಲ್ಲ. ಬಾಲಿವುಡ್ ಸಿನಿಮಾಗಳು ಒಂದಕ್ಕೊಂದು ಪೈಪೋಟಿ ನೀಡಲಿ. ನನ್ನನ್ನು ಒಂಟಿಯಾಗಿ ಬಿಡಿ. ನಾನು ಆ ಸೈಲೆಂಟ್ ರೇಸ್ ನಲ್ಲಿ ಇಲ್ಲ. ಧನ್ಯವಾದಗಳು. ಆದರೆ ಬಾಲಿವುಡ್‌ಗೆ ಅಲ್ಲ’ ಎಂದು ಹೇಳಿದರು.

ಬ್ರಹ್ಮಾಸ್ತ್ರ ಸಿನಿಮಾ ಭಾರತದಲ್ಲಿಯೇ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಓವರ್‌ಸೀಸ್ ಕಲೆಕ್ಷನ್ ಸೇರಿದ್ರೆ 350 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದು ಕಾಶ್ಮೀರ್ ಪೈಲ್ಸ್ ಸಿನಿಮಾದ ಒಟ್ಟು 340 ಕೋಟಿ ರೂಪಾಯಿ ಕಲೆಕ್ಷನ್ ಹಿಂದಿಕ್ಕಿದೆ ಎನ್ನಲಾಗಿದೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!