ಮನೆ ಆವರಣಕ್ಕೆ ನುಗ್ಗಿ ಮುಧೋಳ ನಾಯಿಯನ್ನು ಕೊಂದ ಚಿರತೆ

ಹೊಸದಿಗಂತ ವರದಿ ಹಾಸನ :

ಮನೆ ಆವರಣಕ್ಕೆ ನುಗ್ಗಿದ ಚಿರತೆ ಮುಧೋಳ ನಾಯಿಯನ್ನು ಕೊಂದು ಹೊತ್ತೊಯ್ದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಹಗರೆ ಗ್ರಾಮದಲ್ಲಿ ನಡೆದಿದೆ.

ಹಗರೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸುಮಾರು 100 ಅಡಿ ದೂರದಲ್ಲಿರುವ ಕೃಷ್ಣಮೂರ್ತಿ ಅವರರು ತನ್ನ7 ನಿವಾಸದಲ್ಲಿ ಮುಧೋಳ ನಾಯಿಯನ್ನು ಸಾಕಿದ್ದರು. ಮಧ್ಯರಾತ್ರಿ 1.25 ಕ್ಕೆ ಮನೆಯ ಆವರಣಕ್ಕೆ ಆಹಾರ ಅರಸಿ ಬಂದ ಚಿರತೆಯು ಮನೆಯ ಆವರಣದಲ್ಲಿದ್ದ ನಾಯಿಯನ್ನು ಕೊಂದು ಹೊತ್ತೊಯ್ದಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಗರೆ ಸುತ್ತಮುತ್ತ ಇರುವ ಅರಣ್ಯ ಪ್ರದೇಶದಲ್ಲಿರುವ ಚಿರತೆ ದಾಳಿಯಿಂದ ಗ್ರಾಮಸ್ಥರುಆತಂಕಗೊಂಡಿದ್ದು,
ಕೂಡಲೇ ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!