ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಹಿರಿಯ ಹಾಸ್ಯನಟ ಪ್ರಚಂಡ ಕುಳ್ಳ ದ್ವಾರಕೀಶ್ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ನಿನ್ನೆ ಹೃದಯಾಘಾತದಿಂದ ದ್ವಾರಕೀಶ್ ಅವರು ನಿಧನರಾಗಿದ್ದು, ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರುಶನ ಪಡೆದಿದ್ದರು. ನಟ ಯಶ್ ಕೂಡ ದರುಶನ ಪಡೆದ ನಂತರ ಮಾತನಾಡಿದ್ದಾರೆ.
ಜಗತ್ತಲ್ಲಿ ಎಷ್ಟೊಂದ್ ಜನ ಹುಟ್ತಾರೆ, ಎಷ್ಟೊಂದ್ ಜನ ಸಾಯ್ತಾರೆ. ಬಟ್ ಬದುಕಿರುವಾಗ ಏನು ಮಾಡ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ. ಈ ಜೀವನವೇ ಒಂದು ದೊಡ್ಡ ಅವಕಾಶ. ಇದನ್ನು ಹೇಗೆ ಉಪಯೋಗಿಸಿಕೊಳ್ತೇವೆ ಅನ್ನೋದು ಮುಖ್ಯ. ದ್ವಾರಕೀಶ್ ಅವರು ಸಾರ್ಥಕ ಜೀವನ ಕಂಡಿದ್ದಾರೆ. ಜೀವನದಲ್ಲಿ ಹೇಗೆಲ್ಲಾ ಸಾಧನೆ ಮಾಡಬೇಕು ಎನ್ನುವುದನ್ನು ದ್ವಾರಕೀಶ್ ಅವರಿಂದ ಕಲಿಯಬೇಕು ಎಂದು ಹೇಳಿದ್ದಾರೆ.