ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಭದ್ರತೆ ಹೆಚ್ಚಿಸಲಾಗಿದೆ. ನಿತಿನ್ ಗಡ್ಕರಿ ಅವರ ಖಾಸಗಿ ಕಚೇರಿಗೆ ಈ ಕುರಿತಾದ ಕನಿಷ್ಠ ಮೂರು ಕರೆಗಳು ಬಂದಿದ್ದು, ಕರೆಯಲ್ಲಿ ಮಾಫಿಯಾ ಡಾನ್ ದಾವೂಡ್ ಇಬ್ರಾಹಿಂ ಕಸ್ಕರ್ ಹೆಸರನ್ನು ಹೇಳಿದ್ದಾರೆ.
ಸಂಕ್ರಾಂತಿ ಪ್ರಯುಕ್ತ ಗಡ್ಕರಿ ಅವರು ನಾಗ್ಪುರದಲ್ಲಿ ಇದ್ದು, ಕರೆ ಮಾಡಿದ ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲಿಲ್ಲ ಎಂದಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸಚಿವರ ಕಚೇರಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಲಾಗಿದೆ.