ಗುಮ್ಮಟ ನಗರಿಯಲ್ಲಿ ಬೆಳ್ಳಂಬೆಳಗ್ಗೆ ಲಘು ಭೂಕಂಪನ: ಬೆಚ್ಚಿಬಿದ್ದ ಜನ

ಹೊಸದಿಗಂತ ವರದಿ ವಿಜಯಪುರ: 

ವಿಜಯಪುರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಎರಡು ಬಾರಿ ವಿಚಿತ್ರ ಸದ್ದಿನೊಂದಿಗೆ ಭೂಮಿ ನಡುಗಿದ್ದು, ಸಾರ್ವಜನಿಕರು ಭೀತಿಗೊಳ್ಳುವಂತಾಗಿದೆ. ಬೆಳಗ್ಗೆ 5.44 ಹಾಗೂ 6.22 ಗಂಟೆಗೆ ವಿಚಿತ್ರ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಘಟನೆಯಿಂದ ಬೆಚ್ಚಿಬಿದ್ದ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಇಲ್ಲಿನ ಶಿಕಾರಖಾನೆ, ಕಾಸಗೇರಿ, ಬಸವನಗರ, ಗಣೇಶ ನಗರ, ಕೀರ್ತಿನಗರ, ಜಲನಗರ, ಅಲ್ ಅಮೀನ್ ಎದುರಿನ ಸೇವಾನಗರ, ಸಿದ್ದೇಶ್ವರ ಕಾಲೋನಿ, ಟೀಚರ್ಸ್ ಕಾಲೋನಿ, ಬಿಎಲ್ ಡಿಇ ಏರಿಯಾ, ಗ್ಯಾಂಗ್ ಬಾವಡಿ, ಸೊಲ್ಲಾಪುರ ರಸ್ತೆಯ ಕೆಎಚ್ ಬಿ ಸೇರಿದಂತೆ ಜಿಲ್ಲೆಯ ಇಂಡಿ, ಬಸವನಬಾಗೇವಾಡಿ, ಜಮಖಂಡಿ, ಬಾಗಲಕೋಟೆ ಭಾಗದ ಪ್ರದೇಶದಲ್ಲಿ ಲಘು ಭೂಮಿಕಂಪನವಾಗಿದ್ದು, ಜನರು ಆತಂಕಗೊಳ್ಳುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!