ಹೊಸ ದಿಗಂತ ವರದಿ, ವಿಜಯಪುರ:
ಸಿಡಿಲು ಬಡಿದು ಬಾಲಕ ಸಾವಿಗೀಡಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದ ಜನತಾ ಪ್ಲಾಟ್ ಬಳಿ ನಡೆದಿದೆ.
ಇಲ್ಲಿನ ಪ್ರತಾಪ ಬಸವರಾಜ ಮಾದರ (11) ಮೃತಪಟ್ಟ ಬಾಲಕ.
ಪ್ರತಾಪ ಮಾದರ ಈತ ಕುರಿಮರಿಗಳಿಗೆ ನೀರು ಕುಡಿಸುವ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.