ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾವಿನ ಕೂಪದಿಂದ ಯುವಕ ಕೂದಲೆಳೆ ಅಂತರದಲ್ಲಿ ಬಚಾವಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅಲ್ಲಿ ಹತ್ತಿರದ ಸಿಸಿಟಿವಿಯಲ್ಲಿ ಎದೆ ಝಲ್ ಎನಿಸುವ ದೃಶ್ಯವೊಂದು ಸೆರೆಯಾಗಿದ್ದು, ಸಿಡಿಲಿನಿಂದ ಯುವಕ ಪಾರಾಗಿದ್ದಾನೆ.
ತೆಲಂಗಾಣದ ಅತ್ತಾಪುರದ ಖಾಲಿ ರಸ್ತೆಯೊಂದರಲ್ಲಿ ಭಾರಿ ಸಿಡಿಲು ಬಡಿದಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಇದರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೆಲವು ಎಲೆಕ್ಟ್ರಾನಿಕ್ ವಸ್ತುಗಳು ಮಾತ್ರ ಹಾಳಾಗಿವೆ.
ಕಳೆದ ಒಂದು ವಾರದಿಂದ ತೆಲಂಗಾಣದಲ್ಲಿ ಭಾರೀ ಮಳೆಯಾಗುತ್ತಿದೆ. ಭಾಗ್ಯನಗರದ ರಸ್ತೆಗಳು ಹೊಂಡದಂತಾಗಿದ್ದು, ಟ್ರಾಫಿಕ್ ಜಾಮ್ನಿಂದಾಗಿ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಸೋಮವಾರ ರಾತ್ರಿ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಭಾರೀ ಮಳೆಯ ಸಂದರ್ಭದಲ್ಲಿ ಜನರು ಹೊರಗೆ ಬರಬಾರದು ಎಂದು ಈಗಾಗಲೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.