ದಿಗಂತ ವರದಿ ವಿಜಯಪುರ:
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಜಿಟಿಜಿಟಿ ಮಳೆಯ ಮಧ್ಯೆ ಮಂಗಳವಾರ ಬೆಳಗ್ಗೆ 9.55 ಕ್ಕೆ ಭೂಮಿಕಂಪನಗೊಂಡಿದ್ದು ಸಾರ್ವಜನಿಕರು ಆತಂಕಗೊಳ್ಳುವಂತಾಗಿದೆ.
ಪಟ್ಟಣದಲ್ಲಿ ಆಗಿರುವ ಲಘು ಭೂಕಂಪನ ರಿಕ್ಟರ್ ಮಾಪಕದಲ್ಲಿ 2.4 ರಷ್ಟು ಪ್ರಮಾಣ ದಾಖಲಾಗಿದೆ ಎಂದು ಕೆಎಸ್’ಎನ್’ಡಿಎಂ’ಸಿ ದೃಢಪಡಿಸಿದೆ.
ಕಳೆದೆರಡು ವರ್ಷಗಳಿಂದ ಜಿಲ್ಲೆಯ ಹಲವು ಭಾಗದಲ್ಲಿ ಆಗಾಗ ಲಘು ಭೂಕಂಪನ ಆಗಿರುವುದು ದಾಖಲಾಗಿದೆ.