ಹೊಸದಿಗಂತ ವರದಿ,ಚಿತ್ರದುರ್ಗ :
ಬೀದರ್ ಜಿಲ್ಲೆಯ ಚಿತಗುಪ್ಪ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಶರಣಮ್ಮ ಚಿತ್ರದುರ್ಗ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಇವರು ಕರ್ತವ್ಯ ನಿರ್ವಹಣೆಗಾಗಿ ದೂರದ ಬೀದರ್ ಜಿಲ್ಲೆಯಿಂದ ಬುಧವಾರ ರಾತ್ರಿ ತಮ್ಮ ಒಂದು ವರ್ಷದ ಪುತ್ರಿ ಮಧುಶ್ರೀ ಜೊತೆಗೆ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಹಿರೆಗುಂಟನೂರು ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.