ಹೊಸದಿಗಂತ ವರದಿ,ಹುಣಸೂರು:
ಯಾವುದೇ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ೧೫ ಲಕ್ಷರೂ ಹಣವನ್ನು ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡಿರುವ ಪ್ರಕರಣ ಹುಣಸೂರು-ಎಚ್.ಡಿಕೋಟೆ ಮುಖ್ಯ ರಸ್ತೆಯ ನಲ್ಲೂರು ಪಾಲ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹಳೆ ಪೆಂಜಳ್ಳಿಯ ಶುಂಠಿ ವ್ಯಾಪಾರಿ ಶ್ರೀಧರ್ ತಮ್ಮ ಬೊಲೇರೋ ಜೀಪ್ನಲ್ಲಿ ಹಣ ಸಾಗಿಸುತ್ತಿದ್ದವರು. ಇವರು ಶುಂಠಿ ವ್ಯಾಪಾರಕ್ಕಾಗಿ ಹಣ ಕೊಂಡೊಯ್ಯುತ್ತಿದ್ದರು. ಸೆಕ್ಟರ್ ಮ್ಯಾಜಿಸ್ಟ್ರೇಟ್ ತಂಡ ಹಾಗೂ ಚೆಕ್ ಪೋಸ್ಟ್ ನ ಸಿಬ್ಬಂದಿ ತಡೆದು ತಪಾಸಣೆ ನಡೆಸಿದಾಗ ಬ್ಯಾಗ್ನೊಳಗೆ ೧೫ ಲಕ್ಷ ರೂ. ಇರುವುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು
ಸ್ಥಳಕ್ಕೆ ಉಪ ವಿಬಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್, ತಹಶೀಲ್ದಾರ್ ನಯನಕುಮಾರಿ ಹಾಗೂ ಗ್ರಾಮಾಂತರ ಇನ್ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ಭೇಟಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ವಶಪಡಿಸಿಕೊಂಡಿರುವ ಹಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗುವುದೆಂದು ಉಪ ವಿಬಾಗಾಧಿಕಾರಿ ಮಾಹಿತಿ ನೀಡಿದರು.