ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಹರಿಯಾಣ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಪೂರ್ವ ದೆಹಲಿಯಿಂದ ಕುಲದೀಪ್ ಕುಮಾರ್, ನವದೆಹಲಿಯಿಂದ ಸೋಮನಾಥ್ ಭಾರ್ತಿ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಮಾಜಿ ಕಾಂಗ್ರೆಸ್ ಸಂಸದ ಮಹಾಬಲ್ ಮಿಶ್ರಾ ಪಶ್ಚಿಮ ದೆಹಲಿಯಿಂದ ಎಎಪಿ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ.ಮತ್ತೊಬ್ಬ ಶಾಸಕ ಸಾಹಿ ರಾಮ್ ಪಹಲ್ವಾನ್ ದಕ್ಷಿಣ ದೆಹಲಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಹರಿಯಾಣದಲ್ಲಿ ಎಎಪಿ ಮಾಜಿ ರಾಜ್ಯಸಭಾ ಸಂಸದ ಸುಶೀಲ್ ಗುಪ್ತಾ ಅವರನ್ನು ಕುರುಕ್ಷೇತ್ರದಿಂದ ಕಣಕ್ಕಿಳಿಸಿದೆ.
ಪೂರ್ವ ದೆಹಲಿ – ಕುಲದೀಪ್ ಕುಮಾರ್ (ಶಾಸಕ)
ನವದೆಹಲಿ – ಸೋಮನಾಥ್ ಭಾರ್ತಿ (ಶಾಸಕ)
ಪಶ್ಚಿಮ ದೆಹಲಿ – ಮಹಾಬಲ್ ಮಿಶ್ರಾ (ಮಾಜಿ ಕಾಂಗ್ರೆಸ್ ಸಂಸದ)
ದಕ್ಷಿಣ ದೆಹಲಿ – ಸಾಹಿ ರಾಮ್ ಪಹಲ್ವಾನ್ (ಶಾಸಕ)
ಹರಿಯಾಣ
ಕುರುಕ್ಷೇತ್ರ – ಸುಶೀಲ್ ಗುಪ್ತಾ (ಮಾಜಿ ಸಂಸದ)