ಹೊಸದಿಗಂತ ಡಿಜಿಟಲ್ ಡೆಸ್ಕ್
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಬಡವರಿಗಾಗಿ ಬ್ಲ್ಯಾಂಕೆಟ್ ಬ್ಯಾಂಕ್ ಅನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿರ್ಲಾ ಅವರು ಬಡವರಿಗಾಗಿ ಹೊದಿಕೆಗಳನ್ನು ವಿತರಿಸಿದರು. “ದೆಹಲಿಯಲ್ಲಿ ತಾಪಮಾನ ಕುಸಿಯುತ್ತಿದೆ. ಬಡವರು ಮತ್ತು ನಿರ್ಗತಿಕರಿಗೆ ಸರಿಯಾದ ಆರೈಕೆ ಸಿಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಮತ್ತು ಈ ಕಂಬಳಿಗಳು ಚಳಿಗಾಲದ ಮಧ್ಯದಲ್ಲಿ ಅವರಿಗೆ ಸೌಕರ್ಯವನ್ನು ನೀಡುತ್ತವೆ” ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ತಮ್ಮದೇ ಆದ ಮಟ್ಟದಲ್ಲಿ ಸಮಾಜದ ಪ್ರಗತಿ ಮತ್ತು ಕಲ್ಯಾಣಕ್ಕಾಗಿ ಪ್ರಯತ್ನಗಳನ್ನು ಮಾಡಬೇಕು ಎಂದು ಬಿರ್ಲಾ ಹೇಳಿದರು.
ಸ್ಥಳೀಯ ಮಟ್ಟದಲ್ಲಿ ಸಹಕಾರ, ಸಮ್ಮತಿ ಮತ್ತು ಸಾಮೂಹಿಕತೆಯ ಮನೋಭಾವದಿಂದ ಮರ ನೆಡುವುದು, ಸ್ವಚ್ಛತೆ, ಮಾದಕ ವಸ್ತು ನಿರ್ಮೂಲನೆ ಮತ್ತು ವಯಸ್ಕ ಶಿಕ್ಷಣ ಅಭಿಯಾನಗಳನ್ನು ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಷ್ಟ್ರೀಯ ಸಂಚಾಲಕ ವಿಷ್ಣು ಮಿತ್ತಲ್ ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ