‘ನಿನ್ನ ಕರುಣೆ ಇರಲಿ ಪ್ರಭು’: ಶ್ರೀರಾಮನ ಮೊದಲ ಫೋಟೋ ಹಂಚಿಕೊಂಡ ಟ್ರಸ್ಟ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಮರು ನಿರ್ಮಾಣವಾಗಿದೆ. ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆದ ಬಳಿಕ ಮೊದಲ ಬಾರಿಗೆ ದೇವಸ್ಥಾನ ಟ್ರಸ್ಟ್‌ ಗರ್ಭಗುಡಿಯ ಒಳಗಿನ ಪ್ರಭು ಶ್ರೀರಾಮನ ಚಿತ್ರವನ್ನು ಪ್ರಕಟ ಮಾಡಿದೆ. ಇದಕ್ಕೆ ಹಿಂದಿಯಲ್ಲಿ ಶೀರ್ಪಿಕೆ ಬರೆದಿದ್ದು, ‘ನಿನ್ನ ಕರುಣೆ ಇರಲಿ ಪ್ರಭು..’ ಎನ್ನುವ ಸಾಲನ್ನು ಬರೆದಿದೆ.

ದೇವಸ್ಥಾನದ ಟ್ವಿಟರ್‌ ಪೇಜ್‌ ಹಂಚಿಕೊಂಡ ಈ ಫೋಟೋವನ್ನು ಈವರೆಗೂ 3.66 ಲಕ್ಷ ಮಂದಿ ನೋಡಿದ್ದಾರೆ. 46 ಸಾವಿರ ಮಂದಿ ಲೈಕ್‌ ಒತ್ತಿದ್ದರೆ. 11 ಸಾವಿರ ಮಂದಿ ರೀಟ್ವೀಟ್‌ ಮಾಡಿದ್ದಾರೆ. 1 ಸಾವಿರಕ್ಕೂ ಅಧಿಕ ಕಾಮೆಂಟ್ಸ್‌ಗಳು ಬಂದಿವೆ. ಹೆಚ್ಚಿನ ಕಾಮೆಂಟ್ಸ್‌ಗಳಲ್ಲಿ ಶ್ರೀರಾಮನ ಹೊಸ ಮೂರ್ತಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!