ಹೊಸದಿಗಂತ ವರದಿ, ಮುಂಡಗೋಡ:
ಅಮರ ಪ್ರೇಮಿಗಳಾಗಿ ಬಾಚಣಕಿ ಜಲಾಶಯಕ್ಕೆ ಹಾರಿ ದುರಂತ ಸಾವು ಕಂಡಿದ್ದ, ವಿದ್ಯಾರ್ಥಿ ಪ್ರೇಮಿಗಳ ಪೈಕಿ ಹನುಮಾಪುರ ಗ್ರಾಮದ ಬಿಎ ವಿದ್ಯಾರ್ಥಿ ಮಹೇಶ ಒದ್ದೋಣಿ(19) ಎಂಬಾತನ ಮೃತದೇಹ ಬುಧವಾರ ಪತ್ತೆಯಾಗಿದೆ.
ಇದರೊಂದಿಗೆ ಹುಚ್ಚು ಪ್ರೇಮಕ್ಕೆ ಇಬ್ಬರು ಯುವ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಇಬ್ಬರು ವಿದ್ಯಾರ್ಥಿಗಳು ಪ್ರೀತಿ, ಪ್ರೇಮದ ಅಮಲಿನಲ್ಲಿ ವಿಷ ಸೇವಿಸಿ ಜಲಾಶಯಕ್ಕೆ ಹಾರಿದ್ದರು. ಅಂದೇ ಜಾಕವೆಲ್ ಸಮೀಪವೇ ತನುಜಾ ಮಂಜುನಾಥ ಪಾಟೀಲ(18) ಯುವತಿಯ ಮೃತದೇಹ ಪತ್ತೆಯಾಗಿತ್ತು. ಎರಡು ದಿನಗಳ ಬಳಿಕ ಯುವಕ ಮಹೇಶ ಒದ್ದೋಣಿ (19) ಮೃತದೇಹ ಪತ್ತೆಯಾಗಿದೆ.