ನಾಲ್ಕೈದು ದಿನಗಳಿಂದ ಮನೆಗೇ ಕಾಲಿಟ್ಟಿರಲಿಲ್ಲ ಗುರೂಜಿ ಹತ್ಯೆ ಅರೋಪಿ ಮಹಾಂತೇಶ!

ಹೊಸದಿಗಂತ ವರದಿ, ಹುಬ್ಬಳ್ಳಿ:
ನಾಲ್ಕೈದು ದಿನಗಳಿಂದ ಪತಿ ಮನೆಗೆ ಬಂದಿರಲಿಲ್ಲ. ಕರೆ ಮಾಡಿ ವಿಚಾರಿಸಿದಾಗ, ಕೆಲಸದಲ್ಲಿದ್ದೇನೆ ಎನ್ನುತ್ತಿದ್ದರು…
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಮಹಾಂತೇಶನ ಪತ್ನಿ ವನಜಾಕ್ಷಿ ಇನ್ನಷ್ಟು ಮಾಹಿತಿ ಬಿಚ್ಚಿಟ್ಟರು.
ನನಗೆ ಮಂಗಳವಾರ ಬೆಳಿಗ್ಗೆ ಟಿ.ವಿ.ಯಲ್ಲಿ ನೋಡಿದಾಗಲೇ ಅವರು ಸ್ವಾಮೀಜಿ ಅವರನ್ನು ಕೊಲೆ ಮಾಡಿರುವ ವಿಷಯ ಗೊತ್ತಾಯಿತು. ನಂತರ, ವಿದ್ಯಾನಗರ ಠಾಣೆ ಪೊಲೀಸರು ವಿಚಾರಣೆಗೆ ಕರೆದಾಗ ಹೋಗಿ ನನಗೆ ಗೊತ್ತಿದ್ದನ್ನು ಹೇಳಿದ್ದೇನೆ. ಗುರೂಜಿ ಒಳ್ಳೆಯ ಸ್ವಭಾವದವರು, ನನ್ನ ಪತಿ ಅವರನ್ನು ಹತ್ಯೆ ಮಾಡಿ ತಪ್ಪು ಮಾಡಿದರು ಎಂದು ಪುನರುಚ್ಚರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!