ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಾದ್ಯಂತ ಮಳೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಡುಕ್ಕಿ ಜಿಲ್ಲೆಯ ಲೋವರ್ ಪೆರಿಯಾರ್, ಕಲ್ಲರ್ ಕುಟ್ಟಿ ಅಣೆಕಟ್ಟುಗಳ ಭಾಗದಲ್ಲಿ ಅತ್ಯಧಿಕ ಮಳೆಯಾಗುವ ಸಾಧ್ಯತೆಯಿದ್ದು, ತ್ರಿಶೂರ್ ಜಿಲ್ಲೆಯ ಪೆರಿಂಗಲ್ಕುತ್ ಅಣೆಕಟ್ಟಿನ ಸುತ್ತಮುತ್ತಲಿನ ಭಾಗದಲ್ಲಿಯೂ ಭಾರೀ ಮಳೆ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲು ಸೂಚಿಸಿಸಲಾಗಿದೆ.
ಮಹಾರಾಷ್ಟ್ರ ಕರಾವಳಿ ಭಾಗದಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತದ ಪರಿಣಾಮವೂ ಕೇರಳದ ಮೇಲೆ ಬೀರಲಿದ್ದು, ಕೇರಳ ಕರಾವಳಿ ಕಡೆಗೆ ಸಾಗಿಬರುತ್ತಿರುವ ಮಾರುತಗಳು ತೀವ್ರಗೊಂಡಲ್ಲಿ ಚಂಡಮಾರುತವಾಗಿ ಮಾರ್ಪಾಡಾಗುವ ಸಾಧ್ಯತೆಗಳೂ ಇವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.