ಎಲ್ಲ ನೋವುಗಳ ನಡುವೆ ಶೂಟಿಂಗ್‌ನತ್ತ ಮಹೇಶ್‌ ಬಾಬು ಕಂ ಬ್ಯಾಕ್..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಕೃಷ್ಣ ಅವರ ನಿಧನದಿಂದ ಮಹೇಶ್ ತೀವ್ರ ದುಃಖಿತರಾಗಿದ್ದರು. ಆದರೆ ಆ ನೋವಿನಿಂದ ಈಗ ಹೊರಬರುತ್ತಿದ್ದು, ಶೂಟಿಂಗ್‌ಗೆ ಕಂ ಬ್ಯಾಕ್‌ ಅಗಿದ್ದಾರೆ. ಮಹೇಶ್ ಬಾಬು ಚಿತ್ರೀಕರಣಕ್ಕೆ ಮರಳಿರುವುದರಿಂದ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಆದರೆ, ಇದು ಸಿನಿಮಾದ ಶೂಟಿಂಗ್ ಅಲ್ಲ ಆ್ಯಡ್ ಶೂಟ್ ವೇಳೆ ಕ್ಯಾಮರಾ ಮುಂದೆ ಬಂದಿದ್ದರಿಂದ ಮಹೇಶ್ ಬಾಬು ಮತ್ತೆ ಚಿತ್ರೀಕರಣದತ್ತ ಬರಲು ಸಿದ್ದರಾಗಿದ್ದಾರೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಮತ್ತು ಈ ಜಾಹೀರಾತು ಶೂಟ್‌ಗಾಗಿ ಮಹೇಶ್ ಮತ್ತೊಮ್ಮೆ ಅಲ್ಟ್ರಾ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆದರು. ಮೌಂಟೇನ್ ಡ್ಯೂ ಕಮರ್ಷಿಯಲ್ ಜಾಹೀರಾತಿನಲ್ಲಿ ಭಾಗವಹಿಸಿ ಕೆಲಸದಲ್ಲಿ ಬ್ಯುಸಿಯಾದರೆ ಆ ನೋವನ್ನು ಬೇಗ ಮರೆಯುತ್ತಾರೆ ಎನ್ನುತ್ತಾರೆ ಮಹೇಶ್ ಅವರ ಆಪ್ತರು ಹಾಗೂ ಅಭಿಮಾನಿಗಳು.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಮಹೇಶ್ ತಮ್ಮ ಮುಂದಿನ ಸಿನಿಮಾವನ್ನು ತ್ರಿವಿಕ್ರಮ್ ಅವರ ನಿರ್ದೇಶನದಲ್ಲಿ ಈಗಾಗಲೇ ಆರಂಭಿಸಿರುವುದು ಗೊತ್ತೇ ಇದೆ. ಈ ಚಿತ್ರದ ರೆಗ್ಯುಲರ್ ಶೂಟಿಂಗ್ ನ ಮೊದಲ ಶೆಡ್ಯೂಲ್ ಮುಗಿದಿದೆ. ಸದ್ಯದಲ್ಲೇ ಈ ಚಿತ್ರದ ಎರಡನೇ ಶೆಡ್ಯೂಲ್ ಆರಂಭಿಸಲು ತ್ರಿವಿಕ್ರಮ್ ಮುಂದಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!