ರೈಲು ಇಂಜಿನ್‌ನಿಂದ ಬೇರ್ಪಟ್ಟ ಬೋಗಿಗಳು: ತಪ್ಪಿದ ದೊಡ್ಡ ಅಪಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯಲ್ಲಿ ಸಂಭವಿಸಿದ ಮಾರಣಾಂತಿಕ ರೈಲು ಅಪಘಾತ ಕ್ಷಣ ಮಾತ್ರದಲ್ಲಿ ತಪ್ಪಿದೆ. ಭಾನುವಾರ ಬೆಳಗ್ಗೆ ರೈಲು ಇಂಜಿನ್‌ನಿಂದ ಬೋಗಿಗಳು ಬೇರ್ಪಟ್ಟಿವೆ. ಆದರೆ, ಯಾವುದೇ ಅವಘಡ ಸಂಭವಿಸದ ಕಾರಣ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಉತ್ತರ ಪ್ರದೇಶದ ಗಯಾದಿಂದ ದೆಹಲಿಗೆ ಹೊರಟಿದ್ದ ಮಹಾಬೋಧಿ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಇಂಜಿನ್‌ನಿಂದ ಬೇರ್ಪಟ್ಟಿವೆ.

ಕರ್ವಾಂಡಿಯಾ-ಸಸಾರಂ ರೈಲು ನಿಲ್ದಾಣಗಳ ನಡುವೆ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಈ ವೇಳೆ ರೈಲಿನಲ್ಲಿ 1,300ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ರೈಲು ವೇಗವಾಗಿ ಚಲಿಸುತ್ತಿದ್ದಾಗ 8 ಮತ್ತು 9 ನೇ ಬೋಗಿಗಳು ಎಂಜಿನ್‌ನಿಂದ ಬೇರ್ಪಟ್ಟವು. ಆದರೆ, ಬೇರ್ಪಟ್ಟ ಬೋಗಿಗಳು ಹಳಿಗಳ ಮಧ್ಯದಲ್ಲಿಯೇ ಉಳಿದಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ರೈಲಿನಿಂದ ಬೇರ್ಪಟ್ಟ ಬೋಗಿಗಳು ಹಳಿ ತಪ್ಪುವ ಸಾಧ್ಯತೆ ಇದೆ. ಆದರೆ, ಈ ಘಟನೆಯಲ್ಲಿ ಅಂತಹದ್ದೇನೂ ಆಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ಭಾರೀ ಅನಾಹುತ ತಪ್ಪಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ರೈಲ್ವೇ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ.

ಅಪಘಾತದ ಸ್ಥಳವನ್ನು ತಲುಪಿದ ನಂತರ ಬೋಗಿಗಳನ್ನು ರೈಲಿಗೆ ಮತ್ತೆ ಸೇರಿಸಿದರು. 40 ನಿಮಿಷಗಳ ನಂತರ ರೈಲು ಮತ್ತೆ ಪುನಃ ಪ್ರಾರಂಭವಾಯಿತು. ಘಟನೆಯ ಬಗ್ಗೆ ತನಿಖೆ ನಡೆಸಿ ಕಾರಣಗಳನ್ನು ಪತ್ತೆ ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!