ಬಚ್ಛನ್‌, ಠಾಕ್ರೆ ಮನೆಗೆ ಮಮತಾ ಬ್ಯಾನರ್ಜಿ ಭೇಟಿ: ಬಿಗ್‌ ಬಿ ಗೆ ರಾಖಿ ಕಟ್ಟಿದ ದೀದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಡಿಯಾ ಒಕ್ಕೂಟದ ಮೂರನೇ ಸಭೆಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂಬೈಗೆ ಆಗಮಿಸಿದ್ದು, ಈ ವೇಳೆ ಅವರು ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಛನ್‌ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾಗಿ ರಾಖಿ ಕಟ್ಟಿದ್ದಾರೆ.


ಮುಂಬೈಗೆ ಆಗಮಿಸಿದ ಬ್ಯಾನರ್ಜಿ ಬುಧವಾರ ಮಾತೋಶ್ರಿಯಲ್ಲಿ ಠಾಕ್ರೆ ಕುಟುಂಬವನ್ನು ಭೇಟಿ ಶಿವಸೇನೆಯ ಸಂಸ್ಥಾಪಕ ಬಾಳ್‌ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಫೋಟೋಗೆ ನಮಸ್ಕರಿಸಿದರು. ಈ ವೇಳೆ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆಗೆ ರಕ್ಷಾಬಂಧನದ ನಿಮಿತ್ತ ರಾಖಿ ಕಟ್ಟಿದರು.

ಬಳಿಕ ಮಮತಾ ಬ್ಯಾನರ್ಜಿ ಜುಹು ಬೀಚ್‌ನಲ್ಲಿರುವ ಬಾಲಿವುಡ್‌ ನಟ ಅಮಿತ್‌ ಬಚ್ಛನ್‌ ಅವರ ಇಡೀ ಕುಟುಂಬವನ್ನು ಭೇಟಿ ಮಾಡಿದರು.ಈ ವೇಳೆ ನಟ ಅಭಿಷೇಕ್‌ ಬಚ್ಛನ್‌, ಮಮತಾ ಬ್ಯಾನರ್ಜಿ ಅವರಿಗೆ ಕೈಮುಗಿದು ತಮ್ಮ ನಿವಾಸಕ್ಕೆ ಸ್ವಾಗತ ಮಾಡಿದರು.ಪುತ್ರಿ ಆರಾಧ್ಯ ಹಾಗೂ ಪತ್ನಿ ಐಶ್ವರ್ಯಾ ಈ ವೇಳೆ ಜೊತೆಯಲ್ಲಿದ್ದರು.ಅಮಿತಾಭ್‌ ಬಚ್ಛನ್‌ ಅವರಿಗೆ ರಾಖಿ ಕಟ್ಟಿದ ಮಮತಾ ಬ್ಯಾನರ್ಜಿ, ನನಗೆ ಅಮಿತಾಭ್‌ ಅವರೇ ಭಾರತ ರತ್ನ ಇದ್ದಂತೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!